Wednesday, April 17, 2013

ಕರ್ನಾಟಕದಲ್ಲಿ ಸಾರ್ವಜನಿಕರ ಸ್ವತ್ತಾಗಿ ಕರೆಗಳ ವಿವೇಚನಾತ್ಮಕ ಬಳಕೆ, ಪಾಲನೆ, ರಕ್ಷಣೆ, ಪುರ್ನಬಳಕೆ ಹಾಗು ಯೋಗ್ಯವಾದ ಆಡಳಿತ ಕುರಿತು :

ಕೆರೆಗಳು ನಮ್ಮ ಸಾರ್ವಜನಿಕ ಸ್ವತ್ತುಗಳು :

ಭಾರತೀಯ ಸಂವಿದಾನದ 39(ಬ)2, 48ಎ3 ಮತ್ತು 51ಎ (ಜಿ)4 ಪರಿಚ್ಛೆದಗಳನ್ನು ಆಧರಿಸಿ ಇ ಎಸ್ ಜಿಯು  ಕಾನೂನಿನ ವ್ಯಾಖ್ಯಾಯಲ್ಲಿ ಕೆರೆಗಳು ಸಾರ್ವಜನಿಕ ಸ್ವತ್ತುಗಳು ಹೇಗಾಗುತ್ತವೆ ಎಂದು ತಿಳಿಸಲು ಯತ್ನಿಸುತ್ತದೆ.  ಇದಲ್ಲದೆ ಈ ಪ್ರಕ್ರೀಯೆಯು ಜಲಾನಯನ ಪ್ರದೇಶಗಳ ಸಂವಿಧಾನಾತ್ಮಕ ನಿರ್ವಹಣೆ, ಆಡಳಿತ ಹಾಗು ಸ್ವಾಯತ್ತಯುತವಾದ ಬಳಕೆಗೆ ಪೂರಕವಾಗಿ ನಿಲ್ಲುವ 1992ರ ಸಂವಿಧಾನ ವಿಧಿ(ಪಂಚಾಯತ್ ರಾಜ್ ಗಳಿಗೆ ಮಾನ್ಯತೆ ನೀಡಿದ 73ನೇ ತಿದ್ದುಪಡಿ), ಸಂವಿಧಾನ ವಿಧಿ 1992 (ನಗರ ಸ್ಥಳೀಯ ಸಂಸ್ಥೆಗಳನ್ನು ಮಶನ್ಯತೆ ಮಾಡಿದ 74ನೇ ತಿದ್ದುಪಡಿ) ಮತ್ತು ಇತ್ತೀಚಿನ ಪರಿಶಿಷ್ಟ ವರ್ಗಗಳು ಮತ್ತು ಇತರೆ ಸಾಂಪ್ರದಾಯಿಕ ಕಾಡುವಾಸಿಗಳ ವಿಧಿ 2006 (ಕಾಡಿನ ಹಕ್ಕುಗಳನ್ನು ಗುರುತಿಸುವ)  ಕಾಯಿದೆಗಳನ್ನು ಮತ್ತಷ್ಟು ಬಲಪಡಿಸುತ್ತದೆ. ಇ ಎಸ್ ಜಿಯ ಸಮರ್ಥನೆಯ ಈ ಪ್ರಯತ್ನಗಳು ಕೆರೆಗಳ ವಿವೇಚನಾತ್ಮಕ ಬಳಕೆ, ಪಾಲನೆ, ರಕ್ಷಣೆಗಾಗಿ ಇರುವ ಪ್ರಗತಿಪರವಾದ ನ್ಯಾಯಾಲಯದ ನಿರ್ಣಯಗಳನ್ನು ಎತ್ತಿಹಿಡಿಯಲು ಸಹಕಾರಿಯಾಗಿವೆ. ಇವುಗಳಲ್ಲಿ ಮುಖ್ಯವಾದವು ಜಗ್‍ಪಾಲ್ ಸಿಂಗ್ ಗಿs ಪಂಜಾಬ್ ರಾಜ್ಯ ನಿರ್ಣಯದಲ್ಲಿ ಉಚ್ಚನ್ಯಾಯಾಲಯವು ನ್ಯಾಯಾಂಗಗಳಲ್ಲಿ ಈ ಸಾರ್ವಜನಿಕ ಸ್ವತ್ತುಗಳ ಬಗ್ಗೆ ಬಹುವ್ಯಾಪಕವಾಗಿ ಹರಡಿರುವ ಅಜಾಗರೂಕತೆಯನ್ನು ಗುರುತಿಸಿದೆ. ತನ್ನ ಪ್ರತಿಯೊಂದು ಪ್ರಯತ್ನದಲ್ಲಿಯೂ ಭಿನ್ನ ಭಿನ್ನ ಬೌಗೋಳಿಕ ಪ್ರದೇಶದಲ್ಲಿ ಸಮುದಾಯಗಳು ಸಮಾಜೋ-ಆರ್ಥಿಕ, ಸಾಂಸ್ಕøತಿಕ, ರಾಜಕೀಯ ಹಾಗು ಧಾರ್ಮಿಕ ಅಂಶಗಳಿಂದ ಈ ಜಲಾನಯನ ವ್ಯವಸ್ಥೆಗಳೊಂದಿಗೆ ಬಾಂದವ್ಯವನ್ನು  ಹೊಂದಿರುತ್ತವೆ ಎಂದು ಇ ಎಸ್ ಜಿ ಯು ಗುರುತಿಸುತ್ತದೆ. 

ಈ ಸನ್ನಿವೇಶದಲ್ಲಿ ಈ ಕೆರೆಗಳು, ಕಾಲುವೆಗಳು ಸಾರ್ವಜನಿಕರ ಸ್ವತ್ತು ಎಂಬುದರ ಬಗ್ಗೆ ಎಲ್ಲಾ ಸಾರ್ವಜನಿಕರನ್ನು ಸಂವೇದನಾಶೀಲರನ್ನಾಗಿಸುವುದು ಮತ್ತು ಈ ನೀರಿನ ಮೂಲಗಳ ಮಾಲೀಕರು ರಾಜ್ಯವಲ್ಲ ಬದಲಾಗಿ ಅದು ಕೇವಲ ಅದರ ರಕ್ಷಕರೆಂದು ಹೆಚ್ಚು ಒತ್ತು ನೀಡಬೇಕಿದೆ. ಮುಂದುವರಿದ ನಮ್ಮ ಪ್ರಯತ್ನದಲ್ಲಿ ಈ ಜಲಾನಯನಗಳ ಪ್ರಕೃತಿ ವ್ಯವಸ್ಥೆಯ ಗುಣಮಟ್ಟವನ್ನು ರಾಜ್ಯ ಮತ್ತು ಸಮುಷ್ಟಿಯು ಜವಾಬ್ದಾರಿಯುತವಾಗಿ ನಿರ್ವಹಿಸಿ ಪ್ರಸ್ತುತ ಮತ್ತು ಮುಂದಿನ ಪೀಳಿಗೆಗೆ ಹಸ್ತಾಂತರಿಸಬೇಕು ಎಂಬುದರ ಅರಿವನ್ನು ಮೂಡಿಸುವುದಾಗಿದೆ. 

ಇಂತಹ ಒಂದು ನಿರ್ದಾರವು ಈ ಸಾರ್ವಜನಿಕ ಸ್ವತ್ತುಗಳು ಯಾಕಾಗಿ, ಮುಖ್ಯವಾಗಿ ನಗರ ಪ್ರದೇಶಗಳಲ್ಲಿ, ನಿರ್ಲಕ್ಷಿತವಾದವು ಎಂಬ ಕಾರಣಗಳನ್ನು ಹುಡುಕುತ್ತಾ ಹಾಗೆಯೇ ಇವತ್ತಿನ ಹಾಗು ಮುಂದಿನ ಪೀಳಿಗೆಯವರಿಗಾಗಿ ಪರಿಷ್ಕರಿಸಲು ಯಾವ ಪ್ರಯತ್ನಗಳನ್ನು ಮಾಡಬೇಕೆಂಬ  ಹುಡುಕಾಟದಿಂದ  ಬಂದುದಾಗಿದೆ.  ಈ ಜಲಾನಯನ ಭಾಗಗಳನ್ನು ಸ್ಥಳೀಯ ಸಮುದಾಯಗಳಿಗೆ ಯಾವ ಆಡಳಿತಾತ್ಮಕ ಹಾಗು ನಿರ್ವಾಹಕ ಸಾಮಥ್ರ್ಯವನ್ನು ಒದಗಿಸುವುದರಿಂದ ಅವರ ಹತೋಟಿಯಲ್ಲಿ ಇಟ್ಟುಕೊಳ್ಳಬಹುದು ಮತ್ತು ತಮ್ಮ ಸಮಾಜೋ-ಆರ್ಥಿಕ, ಸಾಂಸ್ಕøತಿಕ ಹಾಗು ಪ್ರಾಕೃತಿಕ ಕಾರ್ಯಗಳಿಗೆ ಅವಕಾಶ ಕಲ್ಪಿಸಿಕೊಳ್ಳಬಲ್ಲರು ಎಂಬುದರ ಬಗ್ಗೆ ಗಮನ ಹರಿಸಬೇಕಾಗಿದೆ. 

ಕಳೆದ ಒಂದು ದಶಕದಲ್ಲಿ ಇಂತಹ ಹಾದಿಯಲ್ಲಿ ಸಾಧನೆಯ ಗತಿಯನ್ನು ಕ್ರಮಿಸಿರುವ ಇ ಎಸ್ ಜಿ ಗೆ ವಿಶ್ವಸಂಸ್ಥೆಯು “ಜೀವಕ್ಕಾಗಿ ನೀರು” ಉತ್ತಮ ಪದ್ದತಿಗಳ 2012ರ ಪುರಸ್ಕಾರವನ್ನು ನೀಡಿದೆ. ಹಾಗೆಯೇ ಇ ಎಸ್ ಜಿಯ ಕೆರೆಗಳ ಉಳಿವಿಗಾಗಿಯ ಪ್ರಯತ್ನಕ್ಕೆ  ಅಂತರಾಷ್ಟ್ರೀಯ ಹಸಿರು ಪ್ರಶಸ್ತಿ, ಲಂಡನ್ ನೀಡುವ 2011 ರ ಉತ್ತಮ ಹಸಿರು ನೀರು ವ್ಯವಸ್ಥಾಪಕ ಚಿನ್ನದ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ.

ಇತ್ತೀಚನ ದಶಕಗಳಲ್ಲಿ ಕೆರೆಗಳ ಬಗ್ಗೆ ಅಸಡ್ಡೆ ಮತ್ತು ನಾಶವನ್ನು ನಿಭಾಯಿಸುವ ಸಮಸ್ಯಗಳು:
ಕೆರೆಗಳು  ಕ್ರಮಬದ್ಧವಾಗಿ ಮತ್ತು ವಾಸ್ತವವಾಗಿ ನಿರ್ಲಕ್ಷಿಸಲ್ಪಡುತ್ತಿರುವ ಪ್ರಸ್ತುತ ಸ್ಥಿತಿಯಿಂದ ವಿಮುಖವಾಗುವುದು ಗಣನೀಯವಾಗಿ ಕಠಿಣವಾಗುತ್ತಿದೆ. ಪ್ರಸ್ತುತ ಸ್ಥಿತಿಗೆ ಮುಖ್ಯ ಕಾರಣಗಳು ಯಾವವೆಂದರೆ:

1. ಕೆರೆಗಳು ಸಾರ್ವಜನಿಕ ಸ್ವತ್ತುಗಳೆಂದು ಎತ್ತಿ ಹಿಡಿಯುವ ಸ್ಪಷ್ಟ ಕಾನೂನಿನ ರಕ್ಷಣೆಯಿಲ್ಲದಿರುವುದು.
2. ಈ ಜಲ ಅಂಗಗಳನ್ನು ಪಾರಂಪರಿಕವಾಗಿ ರಕ್ಷಿಸಿ ನಿರ್ವಹಿಸುತ್ತಿದ್ದ ಸ್ಥಳೀಯ ಸಮುದಾಯ ರಚನೆಗಳ ಸೊರಗುವಿಕೆ.
3. ಸ್ಥಳೀಯ ಹತೋಟಿಗಳನ್ನು ಕಸಿದುಕೊಂಡ ಹೊಣೆಯಿಲ್ಲದ ಸಾರ್ವಜನಿಕ ಪ್ರಭುಗಳು ದುರಾಕ್ರಮಣದಿಂದ ಖಾಸಗಿ ಕಾರ್ಪೊರೇಷನ್ ಸಂಸ್ಥೆಗಳಿಗೆ ದೀರ್ಘಾವಧಿಯ ಭೋಗ್ಯಕ್ಕೆ (ಖಾಸಗೀ ಸಂಸ್ಥೆಗಳು ಸಮರ್ಪಕವಾಗಿ ಕೆರೆಗಳ ರಕ್ಷಣೆ ಮತ್ತು ನಿರ್ವಹಣೆ ಮಾಡಲು ಅನುಕೂಲವಾಗಲೀಯೆಂದು) ನೀಡಿರುವುದು.

ಕೆರೆಗಳ ಖಾಸಗೀಕರಣ ನೀತಿಯನ್ನು ಮೊದಲು ತೊಡಗಿಸಿದ್ದು ಯಾವುದೇ ಅಪೇಕ್ಷೆಯಿಲ್ಲದೆ ಅಸ್ತಿತ್ವಕ್ಕೆ ಬಂದ, ಕರ್ನಾಟಕ ಸರ್ಕಾರದ ಕೆರೆ ಅಭಿವೃದ್ದಿ ನಿಗಮ. ಮೊದಲು ರಚನೆಯಾದಾಗ ಈ ಸಂಸ್ಥೆಯ ಉದ್ದೇಶವಿದ್ದದ್ದು ಕೆರೆಗಳನ್ನು ರಕ್ಷಿಸಿ ಮೋಷಿಸಲು ಸ್ಥಳೀಯ ಸಂಸ್ಥೆಗಳಿಗೆ ಹಾಗು ಸರ್ಕಾರದ ಸಾಮಥ್ರ್ಯವನ್ನು ಕಟ್ಟಿಕೊಳ್ಳಲು ಅವಕಾಶ ನೀಡುವುದಾಗಿತ್ತು. 2002 ರಲ್ಲಿ ಸ್ಥಾಪನೆಯಾಗಿ ಅರಣ್ಯದ ಅಧಿಕಾರಿ ಸಿಬ್ಬಂಧಿಯನ್ನು  ಹೊಂದಿದ್ದ ಈ ಅರೆಸರ್ಕಾರಿ ಸಂಸ್ಥೆಯು ಸರ್ಕಾರಿ-ಖಾಸಗೀ ಸಹಭಾಗಿತ್ವ ಮಾದರಿಯಡಿಯಲ್ಲಿ ಖಾಸಗಿ ಭಾಗೀದಾರಿಕೆಗೆ ಅವಶ್ಯ ಕರ್ತವ್ಯಗಳನ್ನು ನಿರ್ವಹಿಸಲು ಆಹ್ವಾನಿಸಿತು. ಬೆಂಗಳೂರಿನ ನಾಲ್ಕು ಪ್ರಮುಖ ಕೆರೆಗಳನ್ನು ಕೆರೆ ಅಭಿವೃದ್ಧಿ ನಿಗಮವು ನಾಲ್ಕು ಖಾಸಗೀ ಕಾರ್ಪೊರೇಷನ್ ಗಳಾದ ಓಬಿರಾಯ್ಸ್ (ಇಸ್ಟ್ ಇಂಡಿಯಾ ಹೊಟೆಲ್ ಗಳು), ಲುಂಬಿನಿ, ಪಾರ್-ಸಿ ಮತ್ತು ಬಯೋಟ ಗಳಿಗೆ ವಹಿಸಿತು. ಕಡಿಮೆ ಬಾಡಿಗೆ ಗೆ, ವಿಸ್ತರಿಸಬಹುದಾಗಿದ್ದ ಈ ಭೋಗ್ಯವನ್ನು 15 ವರ್ಷಗಳ ಅವಧಿಗೆ ನೀಡಲಾಯಿತು. ಇಂತಹ ಒಂದು ಅವಕಾಶದಿಂದ ಈ ಸಂಸ್ಥೆಗಳು ಹೊಟೆಲ್ ಗಳು, ಉಪಹಾರಗೃಹಗಳು, ಆಹಾರ ಕೋರ್ಟಗಳು, ಜಲ ಪಾರ್ಕಗಳನ್ನು ಒಳಗೊಂಡ ವಾಣಿಜ್ಯ ಸಂಕೀರ್ಣಗಳ ಅಭಿವೃದ್ಧಿಯನ್ನು ತೀವ್ರವಾಗಿ ಮುಂದುವರೆಸಿದವು. ಕುತೂಹಲಕರ ವಿಷಯವೆಂದರೆ ಈ ಕೆರೆಗಳಿಗಾಗಲೇ ರಾಷ್ಟ್ರೀಯ ಕೆರೆ ರಕ್ಷಣಾ ಯೋಜನೆ ಅಥವಾ ನಾರ್ವೆ ಸರ್ಕಾರದ ಧನ ಸಹಾಯದಿಂದ ತಯಾರಾದ ಭಾರತ-ನಾರ್ವೆ ಪರಿಸರ ಕಾರ್ಯಕ್ರಮದಡಿಯಲ್ಲಿ ಅವುಗಳ ರಕ್ಷಣೆಗೆ ಧನ ಸಹಾಯ ನೀಡಲಾಗಿತ್ತು. ಆದ್ದರಿಂದ ಈ ಕೆರೆಗಳನ್ನು ಕೇವಲ ರಕ್ಷಣೆ ಮಾಡಿದ್ದರೆ ಸಾಕಾಗಿತ್ತು, ಅಭಿವೃದ್ಧಿಯ ಅವಶ್ಯಕತೆ ಇರಲಿಲ್ಲ. ಈ ಅಂಶವನ್ನು ಉದ್ದೇಶ ಪೂರ್ವಕವಾಗಿ ಮುಚ್ಚಿಡಲಾಯಿತು ಯಾಕೆಂದರೆ ಈ ಒಪ್ಪಂದಗಳು ಕೆರೆಗಳು ನಿರ್ಲಕ್ಷಿಸಲ್ಪಟ್ಟಿದ್ದಾವೆ ಆದ್ದರಿಂದ ಪುರ್ನಬಳಕೆಯನ್ನು ಬಯಸುತ್ತವೆ ಎಂಬ ಪ್ರಶ್ನಾರ್ಹವಾದ ಪೂರ್ವಪಕ್ಷವನ್ನು ಆಧರಿಸಿದ್ದವು. 

ಇ ಎಸ್ ಜಿ ಯು ಇಂತಹ ಬೇಜವಾಬ್ದಾರಿ ಖಾಸಗೀಕರಣ ಮತ್ತು ಕೆರೆಗಳ ವಾಣಿಜ್ಯೀಕರಣದ ವಿರೋಧವಾಗಿ ಸಮರ್ಪಕ ಮಾಹಿತಿ ನೀಡಿ ಸಾರ್ವಜನಿಕ ಅಭಿಪ್ರಾಯವನ್ನು ರೂಪಿಸಿತು. ಅದರ ಮುಖ್ಯವಾದ ಉದ್ದೇಶವು ಕೆರೆಗಳು ಸಾರ್ವಜನಿಕ ಆಸ್ತಿ ಮತ್ತು ಅವುಗಳ ಲಭ್ಯತೆ, ಪಾಲನೆ ಮತ್ತು ಆಡಳಿತವು ಸಾರ್ವಜನಿಕರ ಹತೋಟಿಯಲ್ಲಿರಬೇಕು ಎಂಬುದು. ಕೆರೆಗಳ ನಿರ್ವಹಣೆಯಲ್ಲಿ ಕಾರ್ಪೊರೇಷನ್ ಗಳ ಭಾಗೀದಾರಿಕೆ ಇರಬೇಕೆಂದಾರೆ ಸಾರ್ವಜನಿಕರ ಹಿತವನ್ನು ಕಾಯುವುದಾದರೆ ಮಾತ್ರವೇ ವಿನಃ ಸಮುದಾಯಗಳನ್ನು ಭಹಿಷ್ಕರಿಸುವ ಅಥವಾ ಅವುಗಳನ್ನು ವಿಪತ್ತಿಗೆ ನೂಕುವಂತಹದ್ದಾಗಿರಬಾರದು. ಈ ಆಲೋಚನೆಗೆ ವ್ಯಕ್ತಿಗಳಿಂದ ಮತ್ತು ಸಂಸ್ಥೆಗಳಿಂದ ಖಾಸಗೀಕರಣದ ನೀತಿಯಿಂದ ಉತ್ತಮವಾದ ಪ್ರತಿಕ್ರೀಯೆ ದೊರೆಯಿತು. ಮಾದ್ಯಮಗಳ ಸಹಕಾರವೂ ಇತ್ತು. ಆದರೆ ಸರ್ಕಾರ ತನ್ನ ನೀತಿಯನ್ನು ಹಿಂತೆಗೆದುಕೊಳ್ಳಲು ಒಪ್ಪಲಿಲ್ಲ. ಬದಲಾಗಿ ಇದೇ ಮಾದರಿಯನ್ನು ಬೆಂಗಳೂರಿನ ಇನ್ನೂ ಅನೇಕ ಕೆರೆಗಳಿಗೆ ಮತ್ತು ಉಳಿದ ನಗರ ಪ್ರದೇಶಗಳಿಗೆ ವಿಸ್ತರಿಸಲು ಹಠಹಿಡಿದು ಮುಂದಾಯಿತು. ಇದೇ ಮಾದರಿಯು ಗುಜರಾತಿನ ಸರ್ಕಾರದ ಮನಸೆಳೆದಿದೆ. ಈ ಸಂಕುಚಿತ ಮಾದರಿಯು ಭಾರತದ ಅನೇಕ ಭಾಗಗಳನ್ನು ಪ್ರೇರೇಪಿಸುತ್ತಿದೆ. ಕೆರೆಗಳು ಸಾರ್ವಜನಿಕರ ಆಸ್ತಿ ಎಂಬ ವಿಚಾರಕ್ಕೆ ವಿಪತ್ತು ಬಂದಿದೆ. 

ಕೆರೆಗಳ ರಕ್ಷಣೆಗಾಗಿ ಇ.ಎಸ್.ಜಿ ಯ ಸಾರ್ವಜನಿಕ ಹಿತಾಸಕ್ತಿ ದಾವೆ :

ಖಾಸಗೀಕರಣದ ಮಾದರಿಯ ನ್ಯಾಯಸಮ್ಮತತೆಯನ್ನು ಪ್ರಶ್ನಿಸಿ ಇ.ಎಸ್.ಜಿ ಯು 2008ರಲ್ಲಿ ಸಾರ್ವಜನಿಕ ಹಿತಾಸಕ್ತಿ ದಾವೆಯನ್ನು ಸಲ್ಲಿಸಿತು. ತನ್ನ ದಾವೆಯಲ್ಲಿ ಸರ್ಕಾರಗಳು ಇಂತಹ ಮಾದರಿಯನ್ನು ಅವಲಂಬಿಸಿದರೆ ಅದು ಅನ್ಯಾಯವಷ್ಟೇ ಅಲ್ಲ ಬದಲಾಗಿ ಸ್ಥಳೀಯ ಸಮುದಾಯಗಳಿಗೆ ಕೆರೆ ಪ್ರವೇಶದ ಹಕ್ಕನ್ನು ನಿರ್ಬಂಧಗೊಳಿಸುವುದಲ್ಲದೆ, ಈ ಜಲಾನಯನ ಪರಿಸರ ವ್ಯವಸ್ಥೆಯ ಜೀವ ವೈವಿದ್ಯತೆಯನ್ನು ನಾಶಮಾಡುತ್ತದೆ. ವಿವಿಧ ಸಮುದಾಯಗಳಿಗೆ ಜೀವನ ನಿರ್ವಹಣೆಯ ಅವಕಾಶಗಳನ್ನು ಕಸಿದುಕೊಳ್ಳುತ್ತದೆ. ತನ್ನ ದಾವೆಯಲ್ಲಿ ಕೆರೆಗಳನ್ನು ವಿವೇಚನೆಯಿಂದ ಬಳಸುವಂತೆ ಅವುಗಳ ರಕ್ಷಣೆಗಾಗಿ ಸೂಕ್ತ ಯೋಜನೆಯನ್ನು ರೂಪಿಸಿ ಇಂದಿನ ಮತ್ತು ಮುಂದಿನ ಪೀಳಿಗೆಯ ಅವಶ್ಯಕತೆಗಾಗಿ ರಕ್ಷಿಸುವಂತೆ ಸರ್ಕಾರಗಳು ಯೋಜನೆ ರೂಪಿಸುವಂತೆ ನಿರ್ದೇಶಿಸಲು ನ್ಯಾಯಾಲಯವನ್ನು ಕೇಳಿಕೊಂಡಿತು.

ದೀರ್ಘವಾಗಿ ಈ ದಾವೆಯನ್ನು ಆಲಿಸಿದ ನ್ಯಾಯಾಲಯವು ಎಲ್ಲಾ ಪಕ್ಷದ ಒಟ್ಟಾಭಿಪ್ರಾಯವನ್ನು ಪರಿಗಣಿಸಿ ಖಾಸಗೀಕರಣದ ಪ್ರಕ್ರೀಯೆಯಗೆ ಮಧ್ಯಂತರ ಆದೇಶದ ಮೂಲಕ ಸ್ಟೇ ನೀಡಿತು. ನಂತರ ಮುಖ್ಯ ಪೀಠವು ಸರ್ಕಾರಿ ವಕೀಲರಿಗೆ  ನಗರದ ಮತ್ತು ರಾಜ್ಯದ ಕೆರೆ ಹಾಗು ಉದ್ಯಾನವನಗಳ ಬಗ್ಗೆ ಸರ್ಕಾರದ ಅಭಿಪ್ರಾಯವನ್ನು ವಿಚಾರಿಸುವಂತೆಯೂ ಹಾಗು ಯಾವುದೇ ತರಹದ ವಾಣಿಜ್ಯ ಚಟುವಟಿಕೆಗಳು ಇವುಗಳ ಪರಿಸರ ಹಾಗು ಜೀವನ ರೀತಿಗೆ ಹಾನಿಯಾಗದಂತೆ ಹಾಗು ಸಾರ್ವಜನಿಕರಿಗೆ ಲಭ್ಯವಿರುವಂತೆ ಭವಿಷ್ಯದಲ್ಲಿ ಕ್ರೀಯಾತ್ಮಕವಾಗಬೇಕೆಂದು ನಿರ್ದೇಶಿಸಿತು.

ಈ ಮೊಕದ್ದಮೆಯನ್ನು ವಿಚಾರಿಸುವ ಸಂದರ್ಭದಲ್ಲಿ ನ್ಯಾಯಾಲಯವು ವಿವಾದಾಂಶದ ಕ್ಲಿಷ್ಟತೆಯನ್ನು ಗಮನಿಸಿ, ಕರ್ನಾಟಕದ ಅರಣ್ಯ ಮುಖ್ಯ ರಕ್ಷಕರಿಗೆ (ಪಿ.ಸಿ.ಸಿ.ಎಪ್) ಖಾಸಗೀಕರಣಗೊಂಡಿರುವ ಕೆರೆಗಳ ಕುರಿತ ಪರಿಸ್ಥಿತಿಯನ್ನು ಕುರಿತು ನ್ಯಾಯಾಲಯಕ್ಕೆ ವರದಿ ನೀಡಬೇಕೆಂದು ತಿಳಿಸಿತು. ಪಿ.ಸಿ.ಸಿ.ಎಪ್ ವರದಿಯು ಎಲ್ಲಾ ಕೆರೆಗಳೂ ಪುರ್ನಬಳಕೆಯ ಸ್ಥಿತಿಯಲ್ಲಿದ್ದು ಸಮರ್ಪಕ ಪಾಲನೆ ಮಾಡಿದರಷ್ಟೇ ಸಾಕು ಎಂದು ಅಭಿಪ್ರಾಯ ಪಟ್ಟಿತ್ತು. ಪರಿಣಾಮವಾಗಿ ಖಾಸಗೀ ಪಕ್ಷಗಳು ಕೆಲಸ ಶುರು ಮಾಡಿದ್ದ ಮೂರೂ ಕೆರೆಗಳಲ್ಲಿ (ಹೆಬ್ಬಾಳ, ನಾಗಾವಾರ ಮತ್ತು ವೆಂಗಯ್ಯ ಕೆರೆ) ಪ್ರಕೃತಿ ಜೀವನ ರೀತಿ ಹಾಗು ಸ್ಥಳೀಯ ಸಮುದಾಯಗಳಿಗೆ ವಾಣಿಜ್ಯೀಕರಣ ಹಾಗು ಖಾಸಗೀಕರಣವು ಋಣಾತ್ಮಕವಾಗಿ ಪ್ರಭಾವಿಸಿದ್ದರಿಂದ ವರದಿಯು ಸರ್ಕಾರವನ್ನು  ತೀವ್ರವಾಗಿ ವಿರೋಧಿಸಿತು. ಈ ವರದಿಯನ್ನು ಆಧರಿಸಿ ಉಚ್ಚನ್ಯಾಯಾಲಯವು ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿಯವರಿಗೆ ಎಲ್ಲಾ ಪಕ್ಷದವರ ಕಾಳಜಿಯನ್ನು ಉದ್ದೇಶದಲ್ಲಿಟ್ಟುಕೊಂಡು ಪರಿಸ್ಥಿತಿಯನ್ನು ಯಥಾಸ್ಥಿತಿಗೆ ತರಲು ಬೇಕಾದ ಯೋಜನೆಯನ್ನು ರೂಪಿಸುವಂತೆ ಕೇಳಿಕೊಂಡಿತು. ಈ ಪ್ರಕ್ರೀಯೆಯಲ್ಲಿ ತನ್ನನ್ನು ತಾನು ಸಕ್ರೀಯವಾಗಿ ತೊಡಗಿಸಿಕೊಂಡ ಇ.ಎಸ್.ಜಿಯು ಕೆರೆಗಳು ಸಾರ್ವಜನಿಕ ಆಸ್ತಿಗಳು, ಜೀವವೈವಿಧ್ಯತೆಯಲ್ಲಿ ಶ್ರೀಮಂತವಾಗಿವೆ, ಜೀವನೋಪಾಯಕ್ಕೆ ಆಧಾರಗಳಾಗಿವೆ, ಹಾಗು ಲಕ್ಷಾಂತರ ಜನರಿಗೆ ನೀರಿನ ಸುರಕ್ಷತೆಯನ್ನು ದೊರಕಿಸಿಕೊಟ್ಟಿವೆ ಎಂದು ಸ್ಫುಟವಾಗಿ ವಾದ ಮಂಡಿಸಿತು. ಆದರೆ ಸರ್ಕಾರವು ಪಿ.ಸಿ.ಸಿ.ಎಪ್ ವರದಿಯನ್ನು ನಿರ್ಲಕ್ಷಿಸಿ ತನ್ನ ಖಾಸಗೀಕರಣದ ನೀತಿಯನ್ನು ಸರಿಯೆಂದು ವಾದಿಸಿದ್ದಲ್ಲದೆ, ಖಾಸಗೀ ಭಾಗೀದರಿತ್ವವಿಲ್ಲದೆ ನಗರ ಪ್ರದೇಶದಲ್ಲಿ ಕೆರೆಗಳನ್ನು ನಿರ್ವಹಿಸಲು ಸಾಧ್ಯವಿಲ್ಲದೇ ಇರುವದರಿಂದ ಕೆರೆಗಳನ್ನು ಕಳೆದು ಕೊಳ್ಳಬೇಕಾಗುತ್ತದೆ ಎಂದು ವಾದಿಸಿತು.

ಕೆರೆಗಳ ರಕ್ಷಣೆಗೆ ಸೂಕ್ತ ಕ್ರಮಗಳನ್ನು ಗುರುತಿಸಲು ನ್ಯಾ|| ಎನ್.ಕೆ. ಪಾಟೀಲ್ ಸಮಿತಿ ರಚನೆ :

ಪರಿಸ್ಥಿತಿಯ ಅನಿವಾರ್ಯತೆಯಿಂದ ಕರ್ನಾಟಕ ಉಚ್ಚ ನ್ಯಾಯಾಲಯವು ತನ್ನ ಮುಖ್ಯ ನ್ಯಾಯಾಧೀಶರಾದ ನ್ಯಾ|| ಎನ್.ಕೆ. ಪಾಟೀಲ್‍ರವರ ಅಡಿಯಲ್ಲಿ ಕೆರೆಗಳ ಹಾಗು ಜಲಾನಯನ ಪ್ರದೇಶಗಳ ನಿರ್ವಹಣೆ ಮತ್ತು ಪಾಲನೆಗೆ ನೇರವಾಗಿ ಸಂಬಂಧಿಸಿದ ಒಂಬತ್ತೂ ವಿಭಾಗಗಳ ಮುಖ್ಯಸ್ಥರನ್ನು ಒಳಗೊಂಡ ಸಮಿತಿಯನ್ನು ರಚಿಸಿತು. ಅನೇಕ ಸಭೆಗಳನ್ನು ಸೇರಿದ ನಂತರ “ಬೆಂಗಳೂರು ನಗರದ ಕೆರೆಗಳ ರಕ್ಷಣೆ” ವರದಿಯನ್ನು ಸಲ್ಲಿಸಿತು. ಈ ವರದಿಯನ್ನು ತಯಾರಿಸುವಲ್ಲಿ ಇ.ಎಸ್.ಜಿಯ ಪಾತ್ರವು ಪ್ರಮುಖವಾದದ್ದು.

ಬೆಂಗಳೂರಿನ ಕೆರೆಗಳ ಸ್ಥಿತಿಯ ಬಗ್ಗೆ ನ್ಯಾಯಾಲಯಕ್ಕೆ ಇರುವ ಕಾಳಜಿಯನ್ನು ನ್ಯಾ|| ಎನ್. ಕೆ. ಪಾಟೀಲ್ ಅವರು ತಮ್ಮ ವರದಿಯ ಮುನ್ನುಡಿಯಲ್ಲಿ ಈ ರೀತಿ ಹೇಳುತ್ತಾರೆ:

“ಬೆಂಗಳೂರು ತೀವ್ರವಾದ ವಿಸ್ತರಣೆಯ ಹಾದಿಯಲ್ಲಿದೆ, ಮೆಟ್ರೋ ನಗರದಿಂದ ಮಹಾ ನಗರದೆಡೆಗೆ. ಈ ಪ್ರಕ್ರೀಯೆಯಲ್ಲಿ ತೀವ್ರವಾಗಿ ಆಘಾತಕ್ಕೆ ಒಳಗಾಗಿರುವ ವಲಯವೆಂದರೆ ಈ ಭಾಗದ ಕೆರೆಗಳು, ದುರ್ಬಳಕೆಗೆ ಒಳಗಾಗಿ ಜಲ ಸುರಕ್ಷತೆಗೆ, ಜೀವನ ರೀತಿಗೆ, ವಾತಾವರಣಕ್ಕೆ ಭೀತಿ ಬಂದಿದೆ. 2020ರ ಹೊತ್ತಿಗೆ ಬೆಂಗಳೂರಿನ ಜನಸಂಖ್ಯೆ 120 ಲಕ್ಷಕ್ಕೆ ಹತ್ತಿರವಾಗಲಿದೆ. ಕ್ರೀಯಾತ್ಮಕವಾದ ನಿರ್ವಹಣೆ, ಯೋಜನೆ ಮತ್ತು ನಿರ್ವಹಣಾ ವ್ಯವಸ್ಥೆಯಿಂದ ಮಾತ್ರ ಜಲಸುರಕ್ಷತೆಯ ಸವಾಲನ್ನು ಎದುರಿಸಲು ಹಾಗು ನಗರವನ್ನು ವಾಸಿಸಲು ಯ್ಯೋಗ್ಯವನ್ನಾಗಿಸಲು ಸಾಧ್ಯ.”

ಈ ವರದಿಯು ಕಾಳಜಿಯಿಂದ ಗಮನಿಸುವುದೇನೆಂದರೆ, “ ಕೆರೆಗಳನ್ನು ಸಮರ್ಪಕವಾಗಿ ನಿರ್ವಹಿಸಿದ್ದರಿಂದಲೇ ಅರೆ-ಬಂಜರು ಪ್ರದೇಶವಾದ ಈ ನಗರವು ಮಹಾನಗರವಾಗಿ ಬೆಳೆಯಲು ಸಾಧ್ಯವಾಯಿತು. ಇಲ್ಲವಾಗಿದ್ದರೆ ಯಶಸ್ವೀ ನಗರವಾಗುವುದರ ಪ್ರಯಾಣ ಯಾವತ್ತೋ ಊನವಾಗಬೇಕಿತ್ತು. ಈ ನಗರಕ್ಕೆ ಕೆರೆಗಳ ಪ್ರಾಮುಖ್ಯತೆಯನ್ನು ಕೆಂಪೇಗೌಡ, ಹೈದರಾಲಿ, ಟಿಪ್ಪು ಆದಿಯಾಗಿ ಬ್ರೀಟೀಷರೂ ಕೂಡಾ ಮನಗಂಡಿದ್ದರು.

ಈ ಭೂಪ್ರದೇಶವನ್ನು ಎಷ್ಟು ಸೃಜಾನಾತ್ಮಕವಾಗಿ ರೂಪಿಸಲಾಗಿತ್ತೆಂದರೆ, 1972ರ ಭಾರತ ಸರ್ವೆಯ ನಕ್ಷೆಯನ್ನು ಆಧರಿಸಿ ಹೇಳುವುದಾದರೆ, ಯಾವುದೊಂದು ಕಣೆವೆಯನ್ನಾಗಲೀ, ಕೊರಕಲ್ಲನ್ನಾಗಲೀ ಉಪೇಕ್ಷಿಸಲಾಗಿರಲಿಲ್ಲ, ಅವುಗಳೆಲ್ಲ ನೀರು ಹರಿದು ಹೋಗಲಿಕ್ಕಾಗಿ ಅಥವಾ ಮಳೆ ನೀರು ಕೊಯ್ಲಿಗಾಗಿ ಬಳಸಲಾಗಿತ್ತು.  ಈ ವ್ಯವಸ್ಥೆಯು ನೀರಿನ ಸುರಕ್ಷತೆಯನ್ನು ಹೆಚ್ಚಿಸಿತ್ತಲ್ಲದೇ, ವ್ಯವಸಾಯಕ್ಕಾಗಿ ಅಥವಾ ತೋಟಗಾರಿಕೆಗಾಗಿ ಅವಕಾಶಗಳನ್ನು ಕಲ್ಪಿಸಿಕೊಟ್ಟಿತ್ತು.

ನೂರಾಮುವತ್ತೇಳು ಪುಟಗಳ ಈ ವರದಿಯಲ್ಲಿ, ನಗರೀಕರಣದ ಪರಿಣಾಮವಾಗಿ ಉಳಿದಿರುವ 386 ಕೆರೆಗಳ ಅಸ್ಥಿತ್ವದೊಂದಿಗೆ ರಾಜಿಯಾಗಿರುವುದು ಅವುಗಳ ಧೃಡತೆಗೆ ಕಂಟಕ ತಂದಿದೆ, 121 ಕೆರೆಗಳ ಸ್ಥಿತಿ ತಿಳಿಯುತ್ತಿಲ್ಲ. ವರದಿಯಲ್ಲಿ ಒಪ್ಪಿಕೊಂಡಿರುವ ಹಾಗೆ 100 ಕೆರೆಗಳು ಮಾಯವಾಗಿವೆ. ಅವುಗಳ ಜಾಗದಲ್ಲಿ ನಗರ ಬಳಕೆಗಳಾದ ಬಸ್ ನಿಲ್ದಾಣಗಳು, ರಸ್ತೆಗಳು, ಲೇಔಟ್ ಗಳು, ತ್ಯಾಜ್ಯ ಸಂಗ್ರಹಗಳಾಗಿ, ಟ್ರಕ್ ನಿಲ್ದಾಣಗಳಾಗಿ ಬದಲಾಯಿಸಿವೆ. ಉಳಿದಿರುವ ಕೆರೆಗಳ ಸ್ಥಿತಿ; ಅತಿಕ್ರಮಣಗೊಂಡಿರುವ, ಮಾಲಿನ್ಯಗೊಂಡಿರುವ, ಉಳಿದುಕೊಂಡಿರುವ ಕೆರೆಯ ಪ್ರಮಾಣ ಹಾಗು ಅದರ ನಿಗಾವಹಿಸುವ ಜವಾಬ್ದಾರಿಯನ್ನು ಯಾರು ಪಡೆದಿದ್ದಾರೆ ಎಂಬುದನ್ನು ಸ್ಪಷ್ಟವಾಗಿ ನೀಡಲಾಗಿದೆ. ಈ ಎಲ್ಲಾ ಮಾಹಿತಿಯನ್ನು ಮೊದಲ ಬಾರಿಗೆ ಸಾರ್ವಜನಿಕರಿಗೆ ಲಭ್ಯಗೊಳಿಸಲಾಗಿದೆ. 

ಈ ಪ್ರಕ್ರೀಯೆಯಲ್ಲಿ ಬೆಂಗಳೂರು ಅಭಿವೃದ್ಧಿ ನಿಗಮ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ, ಕೆರೆ ಅಭಿವೃದ್ಧಿ ಪ್ರಾಧಿಕಾರ, ಕರ್ನಾಟಕ ರಾಜ್ಯ ಅರಣ್ಯ ಇಲಾಖೆ, ಕರ್ನಾಟಕ ರೆವಿನ್ಯೂ ಇಲಾಖೆ, ಕಿರು ನೀರಾವರೀ ಇಲಾಖೆ, ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ನಿಗಮ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಮತ್ತು ಕರ್ನಾಟಕ ಹಳ್ಳಿ ಮತ್ತು ನಗರ ಯೋಜನಾ ನಿಗಮ. ಕೆರೆಗಳ ರಕ್ಷಣೆಗೆ ಸಂಬಂಧಿಸಿದಂತೆ ಪ್ರತಿಯೊಂದು ನಿಗಮ ಮಂಡಳಿಗಳಿಗೆ ಸ್ಪಷ್ಟ ಜವಾಬ್ದಾರಿಗಳನ್ನು ವರದಿಯಲ್ಲಿ ನೀಡಲಾಗಿದೆ.

ಕೆರೆಗಳ ರಕ್ಷಣೆ ಮತ್ತು ಪುರ್ನಬಳಕೆಗೆ ವ್ಯಾಪಕ ಪ್ರಯತ್ನಗಳು :

ಈ ಗುರಿಯನ್ನು ಸಾಧಿಸುವ ಸಲುವಾಗಿ ನ್ಯಾ|| ಎನ್. ಕೆ. ಪಾಟೀಲ್ ಸಮಿತಿಯು ಅನೇಕ ಸಲಹೆಗಳನ್ನು ನೀಡಿತು. ತಕ್ಷಣವೇ ಜಾರಿಗೆ ಬರುವಂತೆ ಕೆರೆಗಳು ಮತ್ತು ರಾಜಾ ಕಾಲುವೆಗಳಲ್ಲಿ ಆಗಿರುವ ಒತ್ತುವರಿಗಳನ್ನು ತೆರವು ಗೊಳಿಸುವುದಾಗಿದೆ. ಇದಕ್ಕಾಗಿ ಎಲ್ಲಾ ಕೆರೆ ಕಾಲುವೆಗಳ ಕಾನೂನು ಮಿತಿಯಲ್ಲಿ ಒಳಪಡುವ ಪ್ರದೇಶವನ್ನು ಅಳತೆ ಮಾಡಿ ಗುರುತು ಮಾಡಬೇಕು. ಇಡೀ ಜಲನಾಯನ ಭೂಮಿಯ ರಕ್ಷಿಸಬೇಕು. ವರದಿಯು ಪ್ರಸ್ತಾಪಿಸಿದ ವ್ಯವಸ್ಥೆಯ ಪ್ರಕಾರ, “ಅಳತೆ, ಒತ್ತುವರಿಗಳ ನಿವಾರಣೆ, ಬೇಲಿ ನಿರ್ಮಾಣ, ಒಡ್ಡು ನಿರ್ಮಾಣ, ಪಹರೆ, ಚರಂಡಿ, ರಾಜಾಕಾಲುವೆಗಳಿಗಿರುವ ಅಡೆ-ತಡೆ ಮತ್ತು ಒತ್ತುವರಿಗಳ ನಿವಾರಣೆ, ಒಡ್ಡುಗಳ ರಿಪೇರಿ, ಹೂಳು ತೆಗೆಯುವುದು ಅನಿವಾರ್ಯವಾಗಿ ಆಗಬೇಕಿದೆ. ಅಲ್ಲದೆ, ಕೆರೆಗಳ ಪರಿಷ್ಕರಣೆಯನ್ನು ಮಾಡುವಾಗ  ಕೇವಲ ಕೆರೆಗಳನಷ್ಟೇ ಅಲ್ಲದೇ ಕೆರೆಗೆ ಬರುವ ಮಳೆ ನೀರು ಬಿದ್ದ ಪ್ರದೇಶ ಮತ್ತು ಮಳೆನೀರು ತರುವ ಕಾಲುವೆಗಳ ಪರಿಷ್ಕರಣೆಯೂ ಸೇರಿರುತ್ತದೆ.” ಕೆರೆಗಳಿಗೆ ಯಾವುದೇ ರೀತಿಯಲ್ಲಿ ಚರಂಡಿಯ ನೀರಾಗಲೀ ಅಥವಾ ಯಾವುದೇ ಕಲ್ಮಶವಾಗಲೀ ಸೇರಕೂಡದೆಂದು ವಿಶೇಷವಾಗಿ ತಿಳಿಸಲಾಗಿದೆ. ವರದಿಯಲ್ಲಿ ಯಾವ ಕೆರೆಗಳಲ್ಲಿ ಜೀವವೈವಿದ್ಯತೆಯು ಅಧಿಕವಾಗಿರುತ್ತದೆಯೂ, ಮುಖ್ಯವಾಗಿ ನೀರು ಕೋಳಿಗಳು ವಲಸೆ ಹೋಗುವಂತಹ ಕೆರೆಗಳಿದ್ದರೆ, ತರೀಜಮೀನು (ರಕ್ಷಣೆ, ಪಾಲನೆ)ಕಾಯಿದೆ 2010ರ ಅನ್ವಯ ಪರಿಸರ ರಕ್ಷಣೆ ಕಾಯಿದೆ 1986 ಅಡಿಯಲ್ಲಿ  ಅವುಗಳನ್ನು ರಕ್ಷಿಸತಕ್ಕದ್ದೆಂದು ತಿಳಿಸಲಾಗಿದೆ.

ಕೆರೆಗಳ ರಕ್ಷಣೆ ಮತ್ತು ಜೀರ್ಣೋದಾರ ಹಾಗು ರಕ್ಷಣೆಯಲ್ಲಿ ಸ್ಥಳೀಯ ಸಮುದಾಯಗಳ ಒಳಗೊಳ್ಳುವಿಕೆಯ ಕುರಿತಾಗಿ ವರದಿಯಲ್ಲಿ ಸ್ಥಳೀಯ ವಾಸಿಗಳ ಮತ್ತು ಸ್ವಯಂ ಸೇವಾಸಂಸ್ಥೆಗಳ ನೆರವನ್ನು ಪಡೆಯಬಹುದೆಂದು ಸಲಹೆನೀಡುತ್ತದೆ. ಪಾರಂಪರಿಕ ಕೆರೆ ಬಳಕೆದಾರರಾದ ದೋಬಿಗಳ ಮತ್ತು ಮೀನುಗಾರರ ಆಸಕ್ತಿಗಳನ್ನು ರಕ್ಷಿಸಬೇಕೆಂದು ಹೇಳಿರುತ್ತದೆ.
ನ್ಯಾಯಲಯವು ಮಾರ್ಚ 3, 2011 ರಂದು ವರದಿಯನ್ನು ಒಪ್ಪಿರುತ್ತದೆ. ನ್ಯಾಯಾಲಯವು ಗಮನಿಸಿದ ಹಾಗೆ ವರದಿಯಲ್ಲಿ ಎಲ್ಲಾ ಪಿರ್ಯಾದುದಾರರ ಪ್ರಾರ್ಥನೆಗೆ ಸಾಂತ್ವಾನ ದೊರೆತಿದೆ ಆದರೆ ಕೆರೆಯ ಹೊರಮೈಯಲ್ಲಿ ಈಗಾಗಲೇ ಕಟ್ಟಡಗಳನ್ನು ಕಟ್ಟಿರುವ ಮತ್ತು ಕಟ್ಟುವ ಪ್ರಯತ್ನದಲ್ಲಿರುವ ಭೋಗ್ಯದಾರರ ಹಕ್ಕು ಮತ್ತು ಕರಾರನ್ನು ಕುರಿತಂತೆ ಚರ್ಚೆಗಳು ನಡೆಯ ಬೇಕಿದೆ. ಈ ವಿಷಯವನ್ನು ಗಮನಿಸಿದ ನ್ಯಾಯಾಲಯವು 7 ಜುಲೈ 2011ರಂದು ಖಾಸಗೀಕರಣವೆಂಬ ಕ್ಲಿಷ್ಟ ವಿಷಯದ ಬಗ್ಗೆ ಈ ರೀತಿಯಾಗಿ ನಿಯಮಗಳನ್ನು ತಿಳಿಸಿತು:

ಆಧುನಿಕ ಕಾಲಘಟ್ಟದಲ್ಲಿ ಸರ್ಕಾರಿ-ಖಾಸಗೀ ಹೊಂದಾಣಿಕೆ ಅನಿವಾರ್ಯವೇ ಆದರೂ ಕೆಲವೊಂದು ಮಿತಿಗಳನ್ನು ನ್ಯಾಯಾಲಯವು ಗುರುತಿಸುತ್ತದೆ. ಖಾಸಗೀ ಸಂಸ್ಥೆಯು ಯಾವುದೇ ಆರ್ಥಿಕ ಲಾಭದ ದೃಷ್ಟಿ ಇಲ್ಲದೇ ಸರ್ಕಾರಿ ಸಂಸ್ಥೆಯೊಂದಿಗೆ ಕೈ ಜೋಡಿಸಿದ್ದರೂ ಸಹ ಸಂಬಂಧಪಟ್ಟ ಖಸಗೀ ವ್ಯಾವಸ್ಥಾಪಕರ ಮನಸ್ಸಿನಲ್ಲಿ ವಾಣಿಜ್ಯ ಆಸಕ್ತಿಗಳಿದ್ದರೆ ಸಾಕು ಸಾರ್ವಜನಿಕ ಆಸಕ್ತಿಗಳು ತೀವ್ರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ. ಆದ್ದರಿಂದ ಸರ್ಕಾರಕ್ಕೆ ಹೊರೆಯಾಗದಂತೆ ಅನುಕೂಲವಾದ, ಯುಕ್ತಾಯುಕ್ತವಾದ ನೀತಿಯೊಂದನ್ನು ರೂಪಿಸುವ ಸಲುವಾಗಿ , ಪಿರ್ಯಾದುದಾರರ ಅಹವಾಲುಗಳಿಗೆ ಕಿವಿಕೊಡುವ ಸಲುವಾಗಿ ಹಾಗು ವಾಣಿಜ್ಯ ಭಾಗೀದಾರಿಕೆಯ ಮಿತಿಗಳನ್ನು ವ್ಯಾಖ್ಯಾನಿಸಿಕೊಳ್ಳುವ ಸಲುವಾಗಿ ಸಭೆ ನಡೆಸಲು ಸಮಿತಿಯು ನಿಶ್ಚಯಿಸಿತು.

ಕೆರೆಗಳ ವಾಣಿಜ್ಯೀಕರಣ ಮತ್ತು ಖಾಸಗೀಕರಣ ಒಪ್ಪಿತವಲ್ಲ: ನ್ಯಾ|| ಎನ್. ಕೆ. ಪಾಟೀಲ್

ನ್ಯಾಯಾಲಯದ ನಿರ್ದೆಶನಾನುಸಾರವಾಗಿ ನ್ಯಾ|| ಪಾಟೀಲ್ ಸಮಿತಿಯು ಕೆರೆ ವ್ಯವಸ್ಥೆಯ ಧೀರ್ಘಾವಧಿ ಪೋಷಣೆಗಾಗಿ ರೂಪಿಸಲು ಬೇಕಾದ ನೀತಿಯ ರೂಪುರೇಶೆಗಳನ್ನು ಚರ್ಚಿಸುವ ಸಲುವಾಗಿ 5ಭಾರಿ ಸಭೆ ಸೇರಿತು. ತನ್ನ ವರದಿಯನ್ನು 12 ಅಕ್ಟೋಬರ್ 2011ರಂದು ವರದಿಯನ್ನು ಸಲ್ಲಿಸಿತು. ಖಾಸಗೀ-ಸರ್ಕಾರೀ ಸಹಭಾಗಿತ್ವದ ವಿಷಯವನ್ನು ವ್ಯಾಪಕವಾಗಿ ಉದ್ದೇಶಿಸಿದ ಮೇಲೆ 10 ಸಲಹೆಗಳನ್ನು ನೀಡಿತು. ಅದರಲ್ಲಿ ಮುಖ್ಯವಾದದ್ದು “ ಯಾವುದೇ ಸನ್ನಿವೇಶದಲ್ಲಾದರೂ ಸರಿ ಕೆರೆಗಳ ವಾಣಿಜ್ಯ ದೃಷ್ಟಿಯಿಂದ ದುರುಪಯೋಗವಾಗುವುದನ್ನು ಒಪ್ಪಿಕೊಳ್ಳಲಾಗದು”. ಈ ಸಲಹೆಗೆ ಪೂರಕವಾಗಿ ಸಮಿತಿಯು ಈ ವಿಷಯವನ್ನು ಗಮನಿಸಿತು:

“ಯಾರ ಪಾಲನೆಗೆಂದು ಕೆರೆಗಳನ್ನು ಒಪ್ಪಿಸಲಾಗಿತ್ತೋ ಆ ಖಾಸಗೀ ವ್ಯವಸ್ಥಾಪಕರು ಅಲ್ಲಿನ ಜೀವವೈವಿಧ್ಯವ್ಯವಸ್ಥೆಗಾಗಲೀ, ಜೀವನ ರೀತಿಗಾಗಲೀ ನ್ಯಾಯ ಒದಗಿಸಿಲ್ಲ. “ಲಾಭ ಪ್ರೇರಣೆ” ಯು “ಸಾರ್ವಜನಿಕ ಆಸಕ್ತಿ” ಮತ್ತು “ಸಾರ್ವಜನಿಕ ನಂಬಿP”É ಯನ್ನು ಮೀರಿ ನಿಂತಿದೆ.

“ಯಾವುದೇ ರೀತಿಯ ಸರ್ಕಾರಿ-ಖಾಸಗೀ ಭಾಗೀದಾರಿಕೆಯ ಮಾದರಿಯಲ್ಲಿ ರಾಜ್ಯದ ಪ್ರಕೃತಿ ಸಂಪನ್ಮೂಲಗಳ ನಿರ್ವಹಣೆಯ/ಪಾಲನೆಯ ಅಧಿಪತ್ಯವನ್ನು  ಖಾಸಗೀ ವ್ಯವಸ್ಥಾಪಕರಿಗೆ ವಹಿಸಿದ್ದೇ ಆದರೆ ರಾಜ್ಯ ಮತ್ತು ಅದರ ಸಿಬ್ಬಂದಿಯು ರಾಜ್ಯ ನೀತಿ ಮತ್ತು ಮಾದರಿಯಿಂದ ವ್ಯವಸ್ಥಾಪಕರು ದೂರ ಸರಿಯದಂತೆ ನಿರಂತರವಾಗಿ ನಿಗಾ ಇಟ್ಟಿರಬೇಕಾದ ಅಸಂಬದ್ದ ಸನ್ನಿವೇಶ ಸೃಷ್ಠಿಯಾಗಿರುತ್ತದೆ. ಕೆಲವೊಮ್ಮೆ ರಾಜ್ಯ ಮತ್ತು ಅಧಿಕಾರೀವರ್ಗಕ್ಕೆ ಕಾರ್ಯಸಾಧ್ಯವಾಗುವಂತಹ ಯಾವುದೇ ಪರಿಹಾರವನ್ನು ಸೂಚಿಸಲಾಗದೆ ಸಾರ್ವಜನಿಕರ ಹಿತಾಸಕ್ತಿಯನ್ನು ಮತ್ತು ಪ್ರಕೃತಿ ಸಂಪನ್ಮೂಲಗಳನ್ನು ಬಲಿಕೊಡುತ್ತಲೇ ಖಾಸಗೀ ವ್ಯವಸ್ಥಾಪಕನನ್ನು ಅನ್ಯಾಯವಾಗಿ ಐಶ್ವರ್ಯವಂತನನ್ನಾಗಿ ಮಾಡಲಾಗುತ್ತಿದೆ.

ಈ ತತ್ವಾಧಾರದ ಮೇಲೆ ವರದಿಯು ಸೂಚಿಸುವುದೇನಂದರೆ , “ಬೆಂಗಳೂರಿನ ಸುತ್ತಮುತ್ತ ಇರುವ ಕೆರೆ-ಕಟ್ಟೆಗಳ ಅಭಿವೃದ್ಧಿಗೆ ಖಾಸಗೀಯವರ ಸಹಾಯವನ್ನು ತಳ್ಳಿಹಾಕದೇ ಇದ್ದರೂ ಪ್ರೂತ್ಸಹಿಸುವುದರಲ್ಲಿ ಯಾವುದೇ ನ್ಯಾಯ ಅಥವಾ ಅವಶ್ಯಕತೆ ಇರುವುದಿಲ್ಲ”

ಈ ವರದಿಯಲ್ಲಿ ಯಾವುದೇ ಮುಚ್ಚುಮರೆಯಿಲ್ಲದೇ ತಿಳಿಸಿರುವಂತೆ  ಖಾಸಗೀ ನಿರ್ವಹಣೆಯಲ್ಲಿ ಕೆರೆಗಳು ತಮ್ಮ ಜೀವವೈವಿಧ್ಯತೆಯ ಅವನತಿಯನ್ನು ಕಂಡಿರುತ್ತವೆ. ಖಾಸಗೀಕರಣ ಮತ್ತು ವಾಣಿಜ್ಯೀಕರಣವು ಅಸಮರ್ಥ ಮತ್ತು ಅವ್ಯವಸ್ಥೆ ಮಾದರಿಯಾಗಿರುತ್ತದೆ. ಖಾಸಗೀ ಅಭಿವೃದ್ಧಿವಾಹಕರು ಮಾತ್ರ ತಾವು ಕೆರೆಗಳನ್ನು ಹಾಳುಮಾಡುತ್ತಿಲ್ಲವೆಂದು ಬೇರೆದಾರಿಯಿಲ್ಲದೆ ರಕ್ಷಣಾತ್ಮಕವಾಗಿ ಮಾತಾಡುತ್ತಾರೆ.

ಕರ್ನಾಟಕದ ಉಚ್ಚನ್ಯಾಯಾಲಯದ ಅಂತಿಮ ತೀರ್ಪು :

ನಾಲ್ಕು ವರುಷದ ನಂತರ ಅಂತಿಮ ವರದಿಯನ್ನು ಮುಖ್ಯ ನ್ಯಾಯಾಧಿಶರನ್ನು ಒಳಗೊಂಡ ಮುಖ್ಯ ಪೀಠದ ಎದುರು ಓದಬೇಕಾಗಿತ್ತು ಆದರೆ ಮುಖ್ಯ ನ್ಯಾ|| ವಿಕ್ರಂಜಿತ್ ಸೆನ್ ಮತ್ತು ನ್ಯಾ|| ಶ್ರೀಮತಿ ಬಿ.ವಿ. ನಾಗರತ್ನ ರವರನ್ನು ಒಳಗೊಂಡ ಪೀಠದಲ್ಲಿ ನ್ಯಾ|| ಬಿ.ವಿ. ನಾಗರತ್ನ ಅವರು ಇದೇ ಕೇಸಿಗೆ ಸಂಬಂಧಪಟ್ಟಂತೆ  ತಮ್ಮ ಕಕ್ಷೀದಾರರ ಪರವಾಗಿ ನ್ಯಾಯಾಲಯದ ಮುಂದೆ ಹಾಜರಾಗಬೇಕಾಗಿ ಬಂದದ್ದರಿಂದ ನ್ಯಾ|| ಶ್ರೀಧರ್ ರಾವ್ ಹಾಗು ನ್ಯಾ|| ಇಂದ್ರಕಲಾರವರನ್ನು ಒಳಗೊಂಡ ಪೀಠಕ್ಕೆ ಸದರಿ ಕೇಸನ್ನು ವರ್ಗಾಯಿಸಲಾಯಿತು. ಈ ಪೀಠವು ನಂತರದ ತಿಂಗಳುಗಳಲ್ಲಿ ವಿಚಾರಣೆ ನಡೆಸಿ  11 ಎಪ್ರಿಲ್ 2012ರಂದು ಅಂತಿಮ ತೀರ್ಪನ್ನು ನೀಡಿತು.

ಸಾರ್ವಜನಿಕ ಹಿತಾಸಕ್ತಿಯ ಮೂಲಾಂಶವಾದ ಕೆರೆಗಳ ಖಾ¸ಗೀಕರÀಣಕ್ಕೆ ಸಂಬಂಧಿಸಿದಂತೆ “ನಮ್ಮ ಎದುರಿಗಿರುವ ಭೋಗ್ಯಕ್ಕೆ ಸಂಬಂಧಿಸಿದಂತೆ, ಈ ಭೋಗ್ಯದಿಂದ ಕೆರೆಗಳ ಪರಿಸರಕ್ಕೆ ಹಾನಿಯಾಗಿದೆ ಎಂಬ ವಾದವಿಷಯವು ಆಧಾರರಹಿತವಾದ ಆರೋಪವಾಗಿರುತ್ತದೆ.” ಎಂದು ಅಭಿಪ್ರಾಯಪಟ್ಟಿರುತ್ತದೆ. ಇಂತಹ ನಿರ್ಣಯವು ನ್ಯಾ|| ಎನ್. ಕೆ. ಪಾಟೀಲ್ ರವರು ಖಾಸಗೀಕರಣದಿಂದ ಪ್ರಸ್ತುತ ಕೆರೆಗಳಿಗೆ ಆಗುತ್ತಿರುವ ಹಾನಿಗೆ ಸಂಬಂಧಿಸಿದ ವಿಚಾರವನ್ನು ಸಂಪೂರ್ಣವಾಗಿ  ಅಲಕ್ಷಿಸಿತ್ತು. ಕೆರೆಗಳ ಖಾಸಗೀಕರಣವನ್ನು ಒಪ್ಪಿತ್ತು. “ಭೋಗ್ಯೀದಾರರು ಒದಗಿಸಿರುವ ದಾಖಲೆಗಳಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಹಾಗು ಮಾಲಿನ್ಯ ನಿಯಂತ್ರಣ ಮಂಡಳಿಯ ನೀಡಿರುವ ಕ್ಲಿಯರೆನ್ಸ್ ಪತ್ರಗಳು ಹಾಗು ವರ್ಷ ವರ್ಷವೂ ಮನರಂಜನಾ ಚಟುವಟಿಕೆಗಳನ್ನು ಮುಂದುವರಿಸಲು ನೀಡಿರುವ ಪರವಾನಿಗೆಗಳು ಸ್ಪಷ್ಟವಾಗಿ  ಅವರುನಮಾಡುತ್ತಿರುವ ಯಾವ ಕೆಲಸವೂ ಅನ್ಯಾಯವಲ್ಲ ಎಂದು ತೋರಿಸುತ್ತವೆ. ವಾದ ವಿಷಯದಲ್ಲಿ ತಿಳಿಸಿರುವ ಹಾಗೆ ಬೋಟಿಂಗ್ ಸೌಲಭ್ಯದಿಂದ ವಾತಾವರಣಕ್ಕೆ ಯಾವುದೇ ಹಾನಿಯಾಗುವುದಿಲ್ಲ; ಶ್ರೀ ಲಕ್ಷ್ಮಣ್ ರಾವ್ ರವರ ವರದಿಯಲ್ಲಿ ಕೆರೆಗಳಿಗೆ ಬೋಟಿಂಗ್ ಸೌಲಭ್ಯ ಒದಗಿಸಲು ಪ್ರಸ್ತಾಪಿಸಲಾಗಿತ್ತು.” ಆದರೆ ಮುಖ್ಯ ಪೀಠವು ಲಕ್ಷ್ಮಣ್ ರಾವ್ ವರದಿಯು ಬಂದಿದ್ದು 1980ರಲ್ಲಿ ಮತ್ತು ಆವತ್ತು ಇದ್ದದಕ್ಕಿಂತ ನಗರೀಕರಣವು ಇಂದು ಮೂರು ಪಟ್ಟು ಹೆಚ್ಚಾಗಿದೆ ಎಂಬ ವಿಷಯದ ಬಗ್ಗೆ ಯಾವ ಸ್ಪಷ್ಟನೆಯನ್ನೂ ನೀಡಲಿಲ್ಲ. ಈ ವಿಷಯವನ್ನು ತುಂಬಾ ಸೂಕ್ಷ್ಮವಾಗಿ ನಿಭಾಯಿಸಬೇಕು ಎಂಬ ಲಕ್ಷ್ಮಣ್ ರಾವ್ ಅವರ ಸಲಹೆಯನ್ನು ಗಂಬೀರವಾಗಿ ಪರಿಗಣೆಸಿದಂತೆ ತೋರಲಿಲ್ಲ. ತನ್ನ ತೀರ್ಪನ್ನು ಮುಂದುವರಿಸಿದ ಪೀಠವು, “ನ್ಯಾ|| ಎನ್.ಕೆ ಪಾಟೀಲ್ ಸಮಿತಿಯು ಸಹ ಮಾಲಿನ್ಯ ಮುಕ್ತವಾಗಿರುವ ಕಾಲ್ದೋಣಿ ಹಾಗು ಬ್ಯಾಟರೀ ಚಾಲಿತ ಬೋಟಿಂಗ್ ಅನ್ನು ಒಪ್ಪುತ್ತದೆ.”

ಅನೇಕ ಬರವಣಿಗೆಗಳ ಮೂಲಕ ಹಾಗು ವಾದಗಳ ಮೂಲಕ ಖಾಸಗೀಕರಣ ಮತ್ತು ವಾಣಿಜ್ಯೀಕರಣವು  ಕೆರೆ ವ್ಯವಸ್ಥೆಯ ಜೀವ ರೀತಿ, ಪ್ರಾಕೃತಿಕ ಹಾಗು ಸಾಮಾಜಿಕ ಪರಿಸರಕ್ಕೆ ಹೊಂದಿಕೆ ಯಾಗುವುದಿಲ್ಲವೆಂದು ಇ.ಎಸ್.ಜಿಯು ಸ್ಪಷ್ಟನೆ ಒದಗಿಸಿತು. ಈಗಾಗಲೇ ಇರುವ ಜನಪರ ನೀತಿ ಮತ್ತು ಸರ್ವೋಚ್ಛ ನ್ಯಾಯಾಲಯವು ಸಾರ್ವಜನಿಕ ಸ್ವತ್ತು ಮತ್ತು ಪರಿಸರವನ್ನು ರಕ್ಷಿಸುವ ಸಲುವಾಗಿ ಹೇಳಿರುವ ಜನಪರ ನಂಬಿಕೆಯ ತಾತ್ವಿಕತೆಯು ರಾಜ್ಯ, ಸಾರ್ವಜನಿಕ ಸ್ವತ್ತು, ಮತ್ತು ಜನರ ನಡುವಿನ ಸಂಬಂಧವನ್ನು ಅಳೆಯಲು ಇರುವ ಮಾಪನವೆಂದು ತಿಳಿಸಿತು. ಆದರೆ ಕರ್ನಾಟಕ ಮುಖ್ಯ ನ್ಯಾಯಲಯದ ವಿಭಾಗೀಯ ಪೀಠವು, “ಕೆರೆಯ ಪರಿಸರಕ್ಕಾಗಲೀ, ಜೀವವೈವಿಧ್ಯತೆಗಾಗಲೀ ಇಲ್ಲಿ ನಡೆಯುವ ಮನರಂಜನಾ ಕಾರ್ಯಕ್ರಮಗಳು ಹಾನಿ ಮಾಡಿವೆ ಎಂದು ತೋರಿಸುವ ಯಾವ ದಾಖಲೆಗಳು ಇಲ್ಲ.” ಮತ್ತೂ ಮುಂದುವರೆದ ಪೀಠವು, “ 15ರಿಂದ 17ರ ಪ್ರತಿವಾದಿಗಳಿಗೆ ನೀಡಿರುವ ಬೋಗ್ಯವು ಕಾನೂನನ್ನು ಉಲ್ಲಂಘಿಸಿದೆ ಎಂಬ ವಾದ ವಿಷಯದಲ್ಲಿ ಯಾವುದೇ ಹುರುಳಿಲ್ಲ. ಕೆರೆಯ ಅಬಿವೃದ್ಧಿಯಲ್ಲಿ ಸಾರ್ವಜನಿಕರ (ಪಬ್ಲಿಕ್) ಭಾಗೀದಾರಿಕೆಯು ರಾಷ್ಟ್ರೀಯ ಹಾಗು ರಾಜ್ಯ ಜಲನೀತಿಗಳಿಗನುಗುಣವಾಗಿಯೇ ಇದೆ.” ಇಲ್ಲಿ ‘ಪಬ್ಲಿಕ್’ ಅಂದರೆ ಯಾರೆಂದು ಸ್ಪಷ್ಟವಾಗಿ ತಿಳಿಸಲಾಗಿಲ್ಲ. ಉಚ್ಚನ್ಯಾಯಾಲಯದಲ್ಲಿನ ಎಂ.ಸಿ ಮೆಹತಾ ವಿರೋಧ ಕಮಲನಾಥ ವಿಚಾರಣೆಯಲ್ಲಿ ಸಾರ್ವಜನಿಕ ಸ್ವತ್ತುಗಳ ನಿರ್ವಹಣೆ ಮತ್ತು ಆಡಳಿತವನ್ನು Doctrine of Public Trust ಮುಖ್ಯವಾಗಿ ನಿರ್ಧರಿಸಬೇಕೆಂದು ತೀರ್ಪು ನೀಡಲಾಗಿದೆ. ಆದರೆ ನ್ಯಾ|| ಶ್ರೀಧರ್ ರಾವ್ ವಿಭಾಗೀಯ ಪೀಠವು ಈ ತೀರ್ಪನ್ನು ಪರಿಗಣಿಸಿಲ್ಲ.

ಬೊಗ್ಯಾಂಶಗಳ ಕಾನೂನು ವಿಷಯಕ್ಕೆ ಸಂಬಂಧಿಸಿದಂತೆ ಪೀಠವು, “ಲೀಸ್ ಎಂಬುದು ತಪ್ಪು ಪದ ಪ್ರಯೋಗವಾಗಿದೆ, ಯಾಕೆಂದರೆ ಬೊಗ್ಯದಾರರ ಹಕ್ಕು ಮತ್ತು ಕರಾರಿನಲ್ಲಿ ಅವರ ಪರವಾಗಿ ಯಾವುದೇ ಭೂಹಕ್ಕನ್ನು ನೀಡಲಾಗಿಲ್ಲ. ಇಲ್ಲಿ ಲೀಸ್ ಗಿಂತ ಯಾವದೇ ಹಕ್ಕುಗಳಿಲ್ಲದ ಲೈಸನ್ಸ್‍ನ್ನು ನಿರ್ದಿಷ್ಠವಾದ ಅವಧಿಗೆ ನೀಡಲಾಗಿದೆ. ಮೀನುಗಾರಿಕೆಯ ಹಕ್ಕನ್ನು ಬೇರೆ ಸಂಸ್ಥೆಗಳಿಗೆ ನೀಡಿರುವುದು ಲೀಸ್ ದಾರರಿಗೆ ಕೆರೆಗಳ ಅಥವಾ ಕೆರೆ ಜಾಗಗಳ ಮೇಲೆ ಯಾವುದೇ ರೀತಿಯ ಅಧಿಕಾರವಿಲ್ಲವೆಂದು ತೋರಿಸುತ್ತದೆ. ಮನರಂಜನಾ ಚಟುವಟಿಕೆಗಳಿಂದ ಕೆರೆಗೆ ಯಾವುದೇ ಹಾನಿಯಾಗಿಲ್ಲ ಎಂಬುದನ್ನು ಎನ.ಕೆ.ಪಾಟೀಲ್ ವರದಿಯು ವಿವರವಾದ ತನಿಕೆಯ ಮೂಲಕ ತಿಳಿಸಿದೆ.”

ಕೆರೆಗಳನ್ನು ಲೀಸ್ ಗೆ ಕೊಟ್ಟಿರುವುದನ್ನು ಸಮರ್ಥಿಸಿಕೊಂಡಿರುವ ವಿಭಾಗೀಯ ಪೀಠವು, ಈ ಸಂದರ್ಭದಲ್ಲಿ  ಎನ್.ಕೆ ಪಾಟೀಲ್ ವರದಿಯು ಕೆರೆಗಳ ಖಾಸಗೀಕರಣ ಮತ್ತು ವಾಣಿಜ್ಯೀಕರಣವನ್ನು ವ್ಯಾಪಕವಾಗಿ ತಿರಸ್ಕರಿಸಿರುತ್ತದೆ ಎಂಬುದನ್ನು ಮರೆತು ಮೇಲುನೋಟಕ್ಕೆ ಸಮಂಜಸವಾಗಿ ತೋರುವಂತೆ ಸಂಶಯಾಸ್ಪದವಾದ ವಿವೇಚನೆಯ ಮೂಲಕ ಅಂಕಿ-ಅಂಶಗಳನ್ನು ಗೋಜಲುಗೊಳಿಸಲು ಯತ್ನಿಸುತ್ತಿದೆ. ಆದ್ದರಿಂದ ಈ ಭಾಗದ ನ್ಯಾಯವನ್ನು ಪ್ರಶ್ನಿಸಿ ಉಚ್ಚನ್ಯಾಯಾಲಯಕ್ಕೆ ಮರುಮನವಿ ಸಲ್ಲಿಸಲಾಗಿದೆ. ಸಾರ್ವಜನಿಕ ಸ್ವತ್ತು ಗಳಿಗೆ ಸಂಬಂಧಿಸಿದ ನೀತಿ ಕಾನೂನುಗಳ ಅಸಂಬದ್ಧ ವ್ಯಾಖ್ಯಾನತಡೆಯಲು, ಇವುಗಳ ನಿರ್ವಹಣೆ, ಆಡಳಿತ, ಹಾಗು ಯಜಮಾನಿಕೆಯಂತಹ ಸಂದಿಗ್ಧ ವಿಷಯಗಳ ವ್ಯಾಪಕಚರ್ಚೆ ಯಾಗ ಬೇಕೆಂಬ ಆಶಯದಿಂದ ಈ ವಿಷಯವನ್ನು ದೇಶದ ಸರ್ವೋಚ್ಛನ್ಯಾಯಾಲಯದ ಎದುರು ಮಂಡಿಸಲಾಗುತ್ತದೆ. 

ಕೆರೆಗಳ ಆಡಳಿತ ಮತ್ತು ನಿರ್ವಹಣೆ ಕುರಿತಂತೆ  ಅಂತಿಮ ಆದೇಶದ ಕಾರ್ಯಕಾರಿ ಭಾಗ :

ಉಚ್ಛನ್ಯಾಯಾಲಯದ ಕಾನೂನು ಸೇವೆಗಳ ಪ್ರಾಧಿಕಾರವನ್ನು ಒಳಗೊಂಡಂತೆ ಕಾನೂನುಬದ್ದವಾದ ಮೇಲ್ವಿಚಾರಣೆ ವ್ಯವಸ್ಥೆಯನ್ನು ಆಧರಿಸಿ ನ್ಯಾಯಾಲಯದ ತೀರ್ಪು ಕೆರೆಗಳ ಆಡಳಿತ ಮತ್ತು ನಿರ್ವಹಣೆಗೆ ರೂಪುರೇಷೆ ಹಾಗು ಕಾರ್ಯವಿಧಾನಗಳನ್ನು ವ್ಯಾಖ್ಯಾನಿಸಿದೆ. ತನ್ನ ಅಂತಿಮ ಆದೇಶ WP ಓo.1841/2006    ಮತ್ತು ಮಧ್ಯಂತರ ಆದೇಶ  WP 817/2008 ದಲ್ಲಿ ಕರ್ನಾಟಕ ರಾಜ್ಯದ ಎಲ್ಲಾ ಕೆರೆಗಳ ಆಡಳಿತ ಮತ್ತು ನಿರ್ವಹಣೆಗೆ ಅಗತ್ಯವಾದ ಈ ಕೆಳಕಂಡ ಸಲಹೆಗಳನ್ನು ನೀಡಿತು.

1. ತ್ಯಾಜ್ಯವಸ್ತು ಹಾಗು ಚರಂಡಿ ನೀರನ್ನು ಕೆರೆ-ಕಟ್ಟೆಗಳಿಗೆ ಹರಿಸಬಾರದು.

2. ರೆವಿನ್ಯು ದಾಖಲೆಗಳ ಪ್ರಕಾರ ಕೆರೆಗಳ ವ್ಯಾಪ್ತಿಯನ್ನು ಅಳೆದು ಅದರ ಸುತ್ತಲೂ ಪ್ರತಿವಾದಿಗಳ ಖರ್ಚಿನಲ್ಲಿ ಬೇಲಿಯನ್ನು ಹಾಕಿಸುವುದು.

3. ಸಂಬಂಧಿಸಿದ ತಜ್ಞರ ತಾಂತ್ರಿಕ ಅಭಿಪ್ರಾಯವನ್ನು ಪಡೆದು ಅರಣ್ಯ ಇಲಾಖೆಯು ಕೆರೆಯ ಸುತ್ತಲೂ ಸಸಿಗಳು ಹಾಗು ಮರಗಳನ್ನು ನೆಡಬೇಕು.

4. ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಯು  ಅರಣ್ಯ ಇಲಾಖೆ ಮತ್ತು ರೆವೆನ್ಯೂ ಇಲಾಖೆ ಯನ್ನು ಒಳಗೊಂಡಂತೆ ಇತರ ಪ್ರತಿಪಾದಕರರಿಗೆ ಕಾರ್ಯಕ್ರಮ ಸಂಘಟಕರಾಗಿರುತ್ತಾರೆ ಮತ್ತು ಕೆರೆ ಉಸ್ತುವಾರಿಯ ಜವಾಬ್ದಾರಿಯನ್ನು ಹೊತ್ತಿರುತ್ತಾರೆ.

ಈ ಎಲ್ಲಾ ಸೂಚನೆಗಳನ್ನು ಎನ್.ಕೆ.ಪಾಟೀಲ್ ಸಮಿತಿಯ ವರದಿಯು ನೀಡಿರುವ ಮಾರ್ಗದರ್ಶನ ಹಾಗು ಸಲಹೆಗಳನ್ನು ಅವಲಂಬಿಸಿರುತ್ತದೆ. 

ಕೆರೆ ಕಾಲುವೆಗಳನ್ನು ಈ ರೀತಿಯಾಗಿ ಪಲನೆ, ಅಭಿವೃದ್ಧಿ ಮಾಡುವಂತೆ ತಿಳಿಸಲಾಗಿದೆ:

1. ಕೆರೆಗಳ ರಕ್ಷಣೆ :
ಕೆರೆ ಜಾಗಗಳ ಸರ್ವೆ ಮಾಡಿ ಅವುಗಳ ವ್ಯಾಪ್ತಿಯನ್ನು ಗುರುತಿಸಿ ಸೂಕ್ತ ರಕ್ಷಣೆಯನ್ನು ಒದಗಿಸಬೇಕು. ಕೆರೆಗೆ ಹಾಕುವ ಬೇಲಿಯು ಸಿಮೆಂಟ್ ಅಥವಾ ಸ್ಟೀಲ್ನಿಂದ ಮಾಡಿರಬಾರದು.

2. ಕೆರೆಯ ಸುತ್ತಲೂ ಯಾವುದೇ ಅಬಿವೃದ್ಧಿ ಕಾರ್ಯಗಳು ನಡೆಯಬಾರದು :
ಕರ್ನಾಟಕ ಸರ್ಕಾರದ ನೀಡಿರುವ ಆದೇಶವನ್ನು ಎತ್ತಿ ಹಿಡಿದಿರುವ ನ್ಯಾಯಾಲಯವು ಯಾವುದೇ ಕಟ್ಟಡಗಳನ್ನು ಅಬಿವೃದ್ಧಿಯ ಹೆಸರಿನಲ್ಲಿ ಕಟ್ಟಬಾರದೆಂದು ಸೂಚಿಸಿದೆ. “ಕೆರೆಯ 30 ಮೀ ನಷ್ಟು ಹೊರಮೈಯಲ್ಲಿ ಯಾವುದೇ ಆಧಾರರಹಿತ ಕಟ್ಟಡಗಳು ಇರಬಾರದು.”

3. ಕೆರೆಗಳ ಸಮರ್ಪಕ ಪಾಲನೆ :
ಕೆರೆಗಳನ್ನು ಸರಿಯಾಗಿ ಪಾಲಿಸಬೇಕು. “ಕಾಲಕಾಲಕ್ಕೆ ಹೂಳು ತೆಗೆಯಬೇಕು. ಕಳೆಗಳಿಂದ ಮುಕ್ತವಾಗಿಡಬೇಕು. ಭದ್ರವಾದ ಒಡ್ಡುಗಳನ್ನು ಕಾಲಕಾಲಕ್ಕೆ ಹಾಕಬೇಕು.

4. ಕೆರೆ-ಕಾಲುವೆಗಳು ಮಾಲಿನ್ಯ ಮುಕ್ತವಾಗಿರಬೇಕು: ತ್ಯಾಜ್ಯ ನೀರು ಕೆರೆಗಳಿಗೆ ಹರಿಯುವುದನ್ನು ನಿಲ್ಲಿಸಬೇಕು. ಕೆರೆಗೆ ನೀರು ತುಂಬಿಸುವ ಕಾಲುವೆಗಳನ್ನು ಕಾಲಕಾಲಕ್ಕೆ ಸರಿಯಾಗಿ ಭದ್ರಪಡಿಸಬೇಕು.

5. ಕೆರೆ ಪ್ರದೇಶ ಹಸಿರೀಕರಣ :
ನ್ಯಾಯಲಯವು ಎನ್.ಕೆ.ಪಾಟೀಲ್ ವರದಿಯ ಪ್ರಮುಖ ಸಲಹೆಯನ್ನು ಎತ್ತಿಹಿಡಿಯುತ್ತದೆ. “ಅರಣ್ಯ ಇಲಾಖೆಯು ಕೆರೆಯ ಸುತ್ತ ಮತ್ತು ಜಲಾನಯನ ಪ್ರದೇಶದಲ್ಲಿ ಗಿಡ ಮರಗಳನ್ನು ನೆಡಬೇಕು.”

6. ಬಿಬಿಎಂಪಿ ವ್ಯಾಪ್ತಿಯಲ್ಲಿ ಬರುವ ಕೆರೆಗಳ ರಕ್ಷಣೆ: “ಬಿಬಿಎಂಪಿ ವ್ಯಾಪ್ತಿಯಲ್ಲಿ ಬರುವ ಕೆರೆಗಳ ರಕ್ಷಣೆಯು ಅದಕ್ಕೆ ಸೇರಿರುತ್ತದೆ.”

7. ಬೆಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಬರುವ ಕೆರೆಗಳು: ಬೆಂಗಳುರು ಅಬಿವೃದ್ಧಿಯ ಪ್ರಾಧಿಕಾರದ ವ್ಯಾಪ್ತಿಯಲ್ಲಿ ಬರುವ ಕರಗಳ ನಿರ್ವಹಣೆಯನ್ನುThe Commissioner, Bangalore Development Authority, The Chief Executive officer, Lake Development Authority and Deputy Conservator of Forest,  ಅವರು ನೋಡಿಕೊಳ್ಳಬೇಕು.

8. ಮುನ್ಸಿಪಲ್ ಕಾರ್ಪೊರೇಶನ್ ಗಳ ವ್ಯಾಪ್ತಿಯಲ್ಲಿ ಬರುವ ಕೆರೆಗಳ ರಕ್ಷಣೆ ಮತ್ತು ಪಾಲನೆ: ನಗರ ಮುನ್ಸಿಪಲ್ ಕಾರ್ಪೊರೇಶನ್ ಗಳ ವ್ಯಾಪ್ತಿಯಲ್ಲಿ ಬರುವ ಕೆರೆಗಳನ್ನು Deputy Commissioner of District, the Commissioner of City Muncipal Corporation and Commissioner of Urban Development Authority ಅವರು ನೋಡಿಕೊಳ್ಳಬೇಕು.

9. ಉಳಿದ ಮುನ್ಸ್ಸಿಪಲ್ ಭಾಗಗಳ ಮತ್ತು ಪಂಚಾಯತ್‍ಗಳ ವ್ಯಾಪ್ತಿಯಲ್ಲಿ ಬರುವ ಕೆರೆಗಳ ನಿರ್ವಹಣೆ: ಈ ವ್ಯಾಪ್ತಿಯಲ್ಲಿ ಬರುವ ಕೆರೆಗಳ ರಕ್ಷಣಾ ಸಮಿತಿಯಲ್ಲಿ Deputy Commissioner of District, Commissioner of Muncipality and District Water Resources Officer ಅವರು ಇರುತ್ತಾರೆ.

10. ನ್ಯಾಯಾಲಯದ ನಿರ್ದೆಶನಗಳ ಆಜ್ಞಾನುವರ್ತಿ ಹಾಗು ಕಾನೂನು ಪಾಲಕನಾಗಿ ಅಪೆಕ್ಸ ಸಮಿತಿಯ ರಚನೆ: ಈ ಎಲ್ಲಾ ನಿರ್ದೆಶನಗಳು ಪರಿಪೂರ್ಣವಾಗಿ ಮತ್ತು ಸರಿಯಾಗಿ ಅನುಸರಿಸಲ್ಪಡುತ್ತಿದ್ದೆ ಎಂದು ನಿಗಾ ಇಡಲು ನ್ಯಾಯಾಲಯವು  Principal Secretary, Department of Revenue, Chief Executive Officer, Lake Development Authority and Member Secretary of State Legal Services Authority  ಇವರನ್ನು ಒಳಗೊಂಡ ಅಪೆಕ್ಸ್ ಸಮಿತಿಯನ್ನು ರಚಿಸಿದೆ. ಇವರು ತಮ್ಮ ವರದಿಯನ್ನು ಅಪೆಕ್ಸ್ ಸಮಿತಿಗೆ ನಾಲ್ಕು ತಿಂಗಳಿಗೊಮ್ಮೆ ವರದಿಯನ್ನು ಸಲ್ಲಿಸಬೇಕು. ಅಪೆಕ್ಸ್ ಸಮಿತಿಯು ಕೆರೆ ಸಮಿತಿಗಳಿಂದ ಯಾವುದೇ ಅಹವಾಲುಗಳನ್ನು ಸ್ವೀಕರಿಸುತ್ತಾವಲ್ಲದೇ ಕೆರೆಗಳಸಿಯಾದ ನಿರ್ವಹಣೆ ಮತ್ತು ಅಬಿವೃಧಿಗೆ ಅಗತ್ಯ ಕಾನೂನು ಸಲಹೆಗಳನ್ನು ನೀಡುತ್ತದೆ.

ಉಪಸಂಹಾರ :

ಇ.ಎಸ್.ಜಿ ಯ ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ ಪ್ರತಿಕ್ರೀಯಯಾಗಿ ಯಾವುದೇ ಪೂರ್ವನಿರ್ದೆಶನದ ಆಧಾರವಿಲ್ಲದೇ ಹೋದರೂ ಸಹ ಉಚ್ಚನ್ಯಾಯಾಲಯದ ಮೊದಲ ಹೆಜ್ಜೆಯ ಕ್ರಮದಿಂದ 38,000 ಕರೆ ಮತ್ತು ಜಲಾನಯನ ಪ್ರದೇಶಗಳ ರಕ್ಷಣೆ, ಪಾಲನೆ, ಹಾಗು ನಿರ್ವಹಣೆಗೆ ಸ್ಥಳೀಯ ಮಟ್ಟದಲ್ಲಿ  ಒಂದು ಸಾಂಸ್ಥಿಕ ರೂಪ ದೊರೆತಿದೆ. ಈ ಪ್ರಾರಂಭವು ಸಂಬಂಧಪಟ್ಟ ಸಂಸ್ಥೆಗಳು, ನ್ಯಾಯ ಪ್ರಾಧಿಕಾರಗಳು, ಚುನಾಯಿತ ಅಂಗಗಳು ಹಾಗು ಸಾಮನ್ಯಜನರಿಗೆ ಕ್ರೀಯಾತ್ಮಕವಾಗಿ ಪ್ರತಿಕ್ರೀಯಿಸಲು ಸಹಾಯ ನೀಡುತ್ತದೆ. ಜಲಸುರಕ್ಷತೆಯನ್ನು ಸಾಧಿಸಬೇಕಾದ ಇಂದಿನ ಸಂದಿಗ್ಧ ಪರಿಸ್ಥಿತಿಯಲ್ಲಿ ಜಲಾನಯನ ವ್ಯವಸ್ಥೆಯಲ್ಲಿ ಜೀವವ್ಯವಿಧ್ಯತೆಯನ್ನು ರಕ್ಷಿಸಲು, ಸಾರ್ವಜನಿಕ ಸ್ವತ್ತುಗಳನ್ನು ಉಳಿಸಿಕೊಳ್ಳಲು, ಜೀವನರೀತಿಗಳನ್ನು ಕಾಯ್ದುಕೊಳ್ಳಲು ಈ ಪ್ರಕ್ರೀಯೆಯು ದೇಶಕ್ಕೆ ಒಂದು ಮಾದರಿಯಾಗಿರುತ್ತದೆ. ಈಗ ಈ ಕಾನೂನಿನ ಪ್ರಗತಿಪರ ಲಕ್ಷಣಗಳು ಜಾರಿಗೊಳ್ಳುವಂತೆ ಪ್ರಯತ್ನಗಳಾಗ ಬೇಕಿದೆ. ಖಾಸಗೀಕರಣವನ್ನು ಒಪ್ಪುತ್ತಿರುವ ನ್ಯಾಯಾಲಯದ ಹಿಮ್ಮುಖ  ನಿರ್ಧಾರವನ್ನು ಸರ್ವೂಚ್ಛನ್ಯಾಯಾಲಯದಲ್ಲಿ ಪ್ರಶ್ನಿಸಲಾಗಿದೆ. ಸರ್ವಸ್ವತಂತ್ರ ಪ್ರಜಾಪ್ರಭುತ್ವ ಗಣರಾಜ್ಯವಾದ ಭಾರತದಲ್ಲಿ ಸಾರ್ವಜನಿಕ ಸ್ವತ್ತುಗಳನ್ನು ನಿಜವಾಗಿಯೂ ಯಾರು ಹೊಂದಿ, ಹತೋಟಿಯಲ್ಲಿ ಇಟ್ಟುಕೊಂಡು, ಆಳಬೇಕು ಎಂಬುದನ್ನು ನಿರ್ಧರಿಸಲು ಈ ಕ್ರಮ ಅನಿವಾರ್ಯವಾಗಿದೆ.

Source : ESG, Bengalooru, India
Translation: K B Saraswathi, Tiptur, Karnataka, India.

Monday, January 7, 2013


Gomal and Kaval lands of Karnataka


Introduction


Gomal and Kaval are some of the commonly used terms for common property land recourses in Karnataka. These lands have various uses and were primarily set aside as provision for some of the common needs that nature could provide to the human kind such as mulch for agriculture and pasture for livestock. Once the symbols of the State’s wealth, these common lands were protected and the use of resources regulated thus also aiding conservation of wildlife. Agriculture, animal husbandry and culture of communities that depended on these lands blossomed together and thus, were intricately interwoven. These sites served to build the army and were sustainably used to aid food and economic security. Folklores like Junjappa kavya, studies on Ashmounds, volumes of Epigraphia Carantica and other inscriptions on hero stones (Turugol Veeragallu) of  those who died while protecting the community wealth such livestock, revels the cultural and historical heritage of these landscapes.
Gomala  and Kavals (Grazing lands)
These cultural and biodiversity rich landscapes were found to exist even during the times of different dynasties rulers like Kadambas, Gangas-Nolambas, Chaalukyas-RastraKootas, Cholas-Pallavas, Vijayanagara and Mysore who ruled over the maidhans of historical Kannada speaking Deccan plateau region, which was once widespread from the banks of River Kaveri up to Godavari.
Earlier days most of the settled village folks, who were normally engaged in agricultural and animal husbandry activities, also took part in the battles and wars as Part-time soldiers along with Full-time soldiers during the times of cattle riding (one of the recognised military activity done to capture the enemies states cattle’s), invasion and disaster mitigation. And as per the tradition and norms stated in scriptural mandates, towards responsibility for the animals as-To respect, To protect, and to take care of our nature, animal and Plants, The Rulers and chiefs of States, by means of benefaction or rewards, may have give away around 200 to 500 acres of grasslands or pasture lands in state control to the village community for their economic well-being and livestock-keeping to the settled village communities. Cattle’s, oxen’s, buffalo’s, sheep and goats, donkeys and horses were the common livestock’s reared in these lands.

Kavals, on other hand are the grazing place reserved in the maidhan regions of Deccan for special breed of live stocks viz cattle’s, Oxen’s, and Horses, and maintained by the state/rulers for the economic and security of their state. The erstwhile rulers of Mysore reserved special breeds of cattle to cater to the requirements of milk, butter and other dairy products of the royal family and especially to haul army supplies. They reserved grazing lands known as Kavals exclusively for rearing these breeds. MarcWilks in his book ‘Historical Sketches of S. India’ mentions that during 1672–1704, Chikkadevaraya Wodeyer established a separate department under the name Benne Chavadi in Kannada dialect that literally translates to “Department of Butter” for better management of cattle and Kavals. The ruler brought the whole Golla community – cattle keepers in the whole of Mysore state– under this office and reserved 240 Kavals consisting of 4 lakh acres of grazing lands in different climate zones for grazing Hallikar, Chitaldoor and other native breeds.
Eco-cultural context:
Livestocks of Benne Chavdi were raised under nomadic conditions due to seasonal variations in fodder availability. The reasons for this were mainly ecological. The rainfall in the Deccan Plateau of Karnataka is highly seasonal and as in many parts of the India, restricted to the three month monsoon where the average rainfall would be 500 mm to 600 mm. The Kaval lands of Bennechavdi were divided into summer, Rainy and winter Kavals according to the seasons of the year during which they were mostly used. Summer Kavals are generally beds of tanks in which grass springs up during the hot summer season, and in which there are trees affording shade to the cattle during heat waves.
 These landscapes along with their rich flora and variety of native grass species also served as a nurturing place for the Great Indian Bustards, Lesser Floricans and several other grassland and scrub specialist species of birds, insects, reptiles and mammals such as leopards, wolves, jackals, hyenas, porcupines, wild bores, mongoose and hares. Most of the shepherding communities depending still on these landscapes from Challakere, Sira, Madhugiri, Kortagere, Pavagada, Hiriyooru even today  follow the practice of moving towards the Kavals of Hassana, Mysore, Mandya, Chikkamagalooru, Davanagere district during winter and summer seasons.
Herding communities (Gollas, Kurubas, Lambadis and Banjaaras) with specialised animal husbandry practices and culture intricately linked to Gundthopu, Gomala, and Kavals blossomed within the landscape. They raised their cattle and animals with the help of their rich traditional knowledge honed to perfection over hundreds of years through observation of nature. World famous Amruthmahal, Krishna Valley, Killari, Dyavani, Hallikar, Deccani and Banoor sheep, are the gifts given by these communities to the humanity.
Even today, these resource-rich landscapes are called as Gomalas, Hullu banni, Billa, Hullu Baare, etc and Kaval and acts as a source of fodder, water, fuel wood, culture and religious significance to the local communities. To mention few examples Kavalbandamma of Bidirammanagudi Kaval Tiptur, Ajjiyanagudi of Kudapara Kaval in Chitradurga, and Amaragiri Rangiha of Rayasandra Kaval of Hassan are economically and culturally interlinked landscapes.
Presently these Kavals are found only in maidhans of southern deccan region of Karnataka. Most of the maidans of northern deccan region appears to have believed in pushed these lands into cultivation by the Nizam’s.

Though majority of the rural poor people are still depended on these Gomals and Kavals for the livelihood, these landscapes are widely considered to be the largely open access land rather common property of the village communities. In recent past, the government has inadvertently released these community lands to different industrial and institutional purposes without consulting locals. Such draconian decisions have caused irreversible damage to the sustainability of such landscapes and to the natural resource dependent rural poor communities . This has also resulted in the loss of several varieties of cattle breeds and other livestock as is evident in Kudapura, Varavu and Ullarthi kavals of Challakere in Chitradurga District.
The lack of a clear policy from the Government in protecting such unique landscapes causing disturbance and annihilation of various rights of local communities. Cultural practices which are intricately linked to such landscapes are eroded, and even lost. This in turn, incapacitates traditional herders in sustaining their herding practices, which form a critical component of traditional knowledge and wisdom protected by the Biological Diversity Act.
Now is the time we take conscious steps towards protecting these landscapes as important watershed sites and biodiversity havens. These landscapes must be protected as ‘Biodiversity Heritage Sites’ or Community Reserves based on an in situ model of conservation and management involving communities dependent on them for their livelihoods and survival.

Maithreya

Sunday, November 25, 2012

Gunduthopu, Gomala and Kaval Lands of Karnataka

ಸಮುದಾಯಿಕ ಜೀವ ಸಂಸ್ಕೃತಿ ನೆಲಗಳು : 
ಗುಂಡು ತೋಪು, ಗೋಮಾಳ ಮತ್ತು ಅಮೃತಮಹಲ್
ಹುಲ್ಲುಗಾವಲು/ಕಾವಲುಗಳು


    ನಾಗರೀಕತೆ ಬೆಳೆದಂತೆ ನಮ್ಮ ಪೂರ್ವಿಕರು ಜೀವನದ ಅವಶ್ಯಕತೆಗಳನ್ನು ಪೂರೈಸಿಕೊಳ್ಳಲು ಪ್ರಾಕೃತಿಕ ಹಾಗು ಸಮುದಾಯಿಕವಾಗಿ ಕಂಡುಕೊಂಡ ಅನಿವಾರ್ಯ ಅನ್ವೇಶಣೆಯೇ ಗುಂಡು ತೋಪು, ಗೋಮಾಳ ಮತ್ತು ಕಾವಲುಗಳು. ನಾಡಿನ ಆಹಾರ, ಆರ್ಥಿಕ ಭದ್ರತೆಯನ್ನು ವದಗಿಸುವ ಮತ್ತು ರಾಜ್ಯ ಸುಭದ್ರತೆಗಾಗಿ ಅರೆ-ಸೈನಿಕರನ್ನು ನಿರ್ಮಿಸುವ ತಾಣವಾಗಿತ್ತು. ಇವುಗಳ ಉದ್ದೇಶ ಹಲವು ರೀತಿಯಾಗಿದ್ದರೂ ಮೂಲವಾಗಿ ಒಂದು ರಾಜ್ಯ / ಪ್ರಾಂತ್ಯದ ಸಂಪತ್ತಿನ ಸೂಚಕವಾಗಿದ್ದವು. ಈ ಪರಿಕಲ್ಪನೆಯುಲ್ಲಿ ನೆಲೆನಿಂತ ಸಮುದಾಯಗಳ ಪಶುಸಂಗೋಪನೆ-ಕೃಷಿ-ಕಲೆಯಂತಹ  ವೈವಿಧ್ಯಮಯ ಸಂಸ್ಕೃತಿ ಯನ್ನು ಅರಳಿಸಿದವುರ ಜೊತೆಜೊತೆ ಅವಿನಾವ ಸಂಬಂಧ ಹೊಂದಿದ್ದವು. ಮೇಲಾಗಿ ಈ ಕಾವಲುಗಳು ಅಪರೂಪದ ವನ್ಯಜೀವಿಗಳ ಆಶ್ರಯ ತಾಣವಾಗಿದ್ದವು. ಜಾನಪದ ಕಾವ್ಯವಾದ ಜುಂಜಪ್ಪ ಕಾವ್ಯ, ಬೂದಿಬೆಟ್ಟಗಳ ಬಗಿಗಿನ ಸಂಶೋಧನೆಗಳು, ಶಾಸನ-ತುರುಗೋಳ್ ವೀರಗಲ್ಲುಗಳು ಹಿಂದೆ ರಾಜ-ಪಾಳೇಗಾರರು ತಮ್ಮ ರಾಜ್ಯದ ಜನ-ಜಾನುವಾರುಗಳಿಗಾಗಿ ಗೋಮಾಳ-ಗುಂಡುತೋಪುಗಳನ್ನು ದಾನ-ದತ್ತಿಯಾಗಿ ನೀಡಿರುವುದರ ಬಗ್ಗೆ ಹಾಗು ಗೋ ಸಂಪತ್ತನ್ನು ರಕ್ಷಿಸಲು ಮಡಿದವರ ಚರಿತ್ರೆಗಳು ಈ ಸಮುದಾಯಿಕ ಭೂಮಿಗಳ ಸಂಮೃದ್ದ ಪರಂಪರೆ ಮತ್ತು ಸಂಸ್ಕೃತಿಗಳ ಇತಿಹಾಸ ತಿಳಿಸುತ್ತವೆ.

ಗುಂಡು ತೋಪು


ಗ್ರಾಮೀಣ ಸಮುದಾಯಗಳು ಅಥವ ಸಮುದಾಯ ಪ್ರಜ್ಞಾಯುಳ್ಳ ವ್ಯಕ್ತಿಗಳು ತಮ್ಮ ಗ್ರಾಮದ ಹೊರ ಭಾಗಗಳಲ್ಲಿ ಪ್ರಜ್ಞಾಪೂರ್ವಕವಾಗಿ ಗಿಡಗಳನ್ನು ನೆಟ್ಟು ಅದರ ಪೋಷಣೆ ಹಾಗು ಸಂರಕ್ಷಣೆ ಕಾರ್ಯಮಾಡಿ ನಿರ್ಮಿಸಿದ ವೃಕ್ಷಗಳ ಸಮೂಹ ಅಥವ ತೋಪುಗಳನ್ನು ಇಂದು ಗುಂಡುತೋಪುಗಳೆಂದು ಕರೆಯುತ್ತೆವೆ.  ಬಯಲು ಸೀಮೆಯ ಹಿಂದಿನ ಮೈಸೂರ ಪ್ರಾಂತ್ಯಗಳಲ್ಲಿ ಕಂಡುಬರುವ ಈ ವೃಕ್ಷ ಸಮುಹಗಳ ನಿರ್ಮಾಣದ ಮೂಲ ಪರಿಕಲ್ಪನೆಯು ಈ ನೆಲದ ಮೂಲವಾಸಿ ಮತ್ತು ದ್ರಾವಿಡ ಸಂಸ್ಕೃತಿಯದಾಗಿರುತ್ತದೆ. ತದನಂತರದಲ್ಲಿ ಈ ಸಂಸ್ಕೃತಿಯು ವೈದಿಕ ಸಂಪ್ರದಾಯದಲ್ಲಿ ಬೆರತು ಕ್ಷೀತಿರುಹನೋಂಪಿ (ಗಿಡ ನೆಡುವ ವ್ರತ) ಎಂಬ ವೈದಿಕ ಸಂಪ್ರದಾಯವಾಯಿತು. 

ಗಿಡ ನೆಡುವ ವ್ರತದ ಉದ್ದೇಶ ಸಾಮಾನ್ಯವಾಗಿ ಪಾಪಗಳನ್ನು ತೊಳೆದು ಪುಣ್ಯಗೊಳಿಸುವುದಾಗಿರತ್ತದೆ. ಬಿಜಾಪುರದ ಹಿರೆಬೇವಿನೂರುನಲ್ಲಿ ದೊರೆತ ಕ್ರಿ. ಶ 1190 ರ ಶಾಸನವು, 30 ಗ್ರಾಮದ ಯಜಮಾನನಾದ ಬೂಪಯ್ಯನ ಹೆಂಡತಿ ಸಿರಿಯದೇವಿಯು ವೈದಿಕ ಧರ್ಮದಲ್ಲಿ ಸೂಚಿಸಿದ ಎಲ್ಲಾ ವ್ರತಗಳನ್ನು ಮಾಡಿ ಮುಗಿಸಿದರೂ ಇನ್ನೊಂದು ಕ್ಷಿತಿರುಹನೋಪಿ ವ್ರತವುಂಟೆಂದು ಕೇಳಿ ಸಂತೋಷದಿಂದ ಗಿಡ ನೆಡುವ ವ್ರತ ಆಚರಿಸಿ ಅದರಲ್ಲಿ ನೆರಳೆ, ವಿಳ್ಯದೆಲೆ, ಹಲಸು, ತೆಂಗು ಮತ್ತು ಇತರೆ ವನಸ್ಪತಿ (ಕಾಡು ಗಿಡ)ಗಳನ್ನು ನೆಟ್ಟು ಪೋಷಿಸಿದಳು ಎಂದು ತಿಳಿಸುತ್ತದೆ. ಹಾಗೆ, ಗಿಡಗಳನ್ನು ಪೋಷಿಸಲು ನೀರಿಗಾಗಿ ಸಣ್ಣ ಕೊಳ ಮತ್ತು ಆತ್ಮಸ್ಥರ್ಯ ಹಾಗು ವಿಶ್ರಾಂತಿಗಾಗಿ ಸ್ಥಳಿಯ ದೇವರ ಗುಡಿ ಕಟ್ಟಿಕೊಳ್ಳುತ್ತಿದ್ದರು. 



ಈ ಗುಂಡು ತೋಪುಗಳೂ ಸಮಾನ್ಯವಾಗಿ ಒಂದೇ ಬಗೆಯ ವೃಕ್ಷಗಳ ಸಮೂಹವಾಗಿದ್ದು ಬಹುತೇಕ ಸಮೂಹಗಳು ಹಿಪ್ಪೆ ಮರಗಳಿಂದ (ಮಧುಕ ಲಾಂಗಿಫೋಲಿಯಾ) ಕೂಡಿರುತ್ತಿದ್ದವು. ರಾತ್ರಿ ಸಮಯದಲ್ಲಿ ದೀಪ-ದೊಂದಿಯನ್ನು ಉರಿಸಲು, ಚಕ್ಕಡಿಗಳ ಕೀಲ ಎಣ್ಣೆಯಾಗಿ ಬಳಸಲು ಹಿಪ್ಪೆ ಎಣ್ಣೆಯನ್ನು / ಉತ್ಪನ್ನಗಳನ್ನು ಸಮುದಾಯದ ಅಗತ್ಯಗಳಿಗಾಗಿ ಆ ಗ್ರಾಮದ ಜನರು ಬಳಸಿಕೊಳ್ಳುತ್ತಿದ್ದರು. ಹಾಗೆ ಇವರುಗಳು ಬಿಡುವಿನ ವೇಳೆಯನ್ನು ತಮ್ಮ ಯುದ್ದ ಕೌಶಲ್ಯಗಳನ್ನು ಮತ್ತು ದೇಹದಾಢ್ಯತೆಯನ್ನು ಹೆಚ್ಚಿಸಿ ಕೊಳ್ಳಲು ಈ ವೃಕ್ಷಸಮೂಹಗಳಲ್ಲಿ ಗಾರುಡಿ ಮನೆಯನ್ನಾಗಿ ಬಳಸುತ್ತಿದ್ದುರ ಬಗೆ ಅರಸೀಕೆರೆಯ ಹುಂಡಿಗನಾಳಿನಲ್ಲಿ ಮಾಹಿತಿ ದೊರೆಯುತ್ತದೆ. ಮುಂದೆ ಅಲ್ಲಿನ ಗುಡಿ ಮಂದಿರಗಳು ದೇವಸ್ಥಾನಗಳಾಗಿ ಮತ್ತು ಕೊಳಗಳು ಕಲ್ಯಾಣಿಗಳಾಗಿ ಪರಿವರ್ತನೆಗೊಂಡವು ಎಂಬುದನ್ನು ಕಾವಲು-ಗುಂಡು ತೋಪಗಳ ಬಳಿಯಿರುವ ದೇವಸ್ಥಾನಗಳಿಂದ ತಿಳಿದು ಬರುತ್ತದೆ. (ಉದಾ:ತಿಪಟೂರು ಬಳಿಯಿರುವ ಬಿದಿರಮ್ಮನ ಗುಡಿ ತೋಪು, ಕಾವಲು ಬಂದಮ್ಮನ ಗುಡಿ ಮತ್ತು  ಬಿದರಮ್ಮನ ಗುಡಿ ಕಾವಲು).

ಕಾಲ ಕ್ರಮೇಣ ಈ ಗುಂಡು ತೋಪುಗಳು ಕಾಲ ಕಾಲಕ್ಕೆ ಪ್ರಯಾಣಿಕರು ಮತ್ತು ಸೈನಿಕರ ತಂಗುದಾಣವಾಗಿ, ವ್ಯಾಪಾರಿಗಳ ವ್ಯಾಪರ ಸ್ಥಳವಾಗಿ ಹಾಗು ಅಲೆಮಾರಿ ಪಂಗಡದ (ಬಂಜಾರರ ಹಾಗು ಜೋಗಿಗಳು) ಜನರ ನೀರ-ನೆರಳಿನ ಸುರಕ್ಷಿತ ಆಶ್ರಯ ತಾಣವಾಗಿ ರೂಪಾಂತರ ಗೊಂಡವು. ನಂತರದಲ್ಲಿ ಗುಂಡುತೋಪಿನಲ್ಲಿ ಹಿಪ್ಪೆಮರದಿಂದ ಹುಣುಸೆಮರ, ಮಾವಿನಮರ ನಂತರ ಸಂಪಿಗೆ, ಆಲ, ಅರಳಿ ಹಾಗು ಬೇವು ಮುಂತಾದ ನೂರು ವರ್ಷಕ್ಕು ಮಿಕ್ಕಿ ಬಾಳುವ ಮರಗಳು ಜನ-ಜಾನುವರುಗಳ ಅಗತ್ಯಕ್ಕೆ ಹಾಗು ಸಂದರ್ಭ ಅನುಗುಣವಾಗಿ ಈ ತೋಪಗಳಲ್ಲಿ ಪ್ರಾಮುಖ್ಯತೆ ಪಡೆದುಕೊಂಡಿವೆ. 


ಗೋಮಾಳಗಳ :


ದಖ್ಖನ್ ಪ್ರಸ್ಥ ಭೂಮಿಯ ವಿಶಾಲ ಮೈದಾನದಲ್ಲಿ ಹರಿಯುತ್ತಿದ್ದ ಕಾವೇರಿ ತೀರದಿಂದ ಗೋಧಾವರಿಯವರೆಗು ಹಬ್ಬಿದ ಅಂದಿನ ಕರುನಾಡನ್ನು, ಕದಂಬರು, ಗಂಗ-ನೊಳಂಬರು, ಚಾಲುಕ್ಯ-ರಾಷ್ಠ್ರಕೂಟರು, ಚೋಳ-ಪಲ್ಲವರು, ವಿಜಯನಗರ-ಮೈಸೂರು ಮಹಾರಜರುಗಳ ಆಳ್ವಿಕೆ ಮಾಡಿದ ಪ್ರಾಂತ್ಯ/ರಾಜ್ಯಗಳಲ್ಲಿ  ಅಪಾರ ಜೀವವೈವಿಧ್ಯತೆ ಹಾಗು ಸಂಸ್ಕೃತಿ ಭರಿತ ಈ ಸಮುದಾಯಿಕ ನೆಲಗಳು ಅಸ್ಥಿತ್ವದಲ್ಲಿರುವುದು ಕಂಡುಬರುತ್ತದೆ.

ಅಂದಿನ ದಿನಗಳಲ್ಲಿ ನೆಲೆನಿಂತ ಹಳ್ಳೀಗಾಹಿಗಳು, ಸಮಾನ್ಯವಾಗಿ ಪಶುಸಂಗೋಪನೆ ಮತ್ತು ಕೃಷಿ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿರುತ್ತಿದ್ದರು. ಇವರುಗಳು ಗೋ-ಗ್ರಹಣ(ಪರ ರಾಜ್ಯದ ಗೋಸಂಪತ್ತನ್ನು ಅಪಹರಿಸುವು ಒಂದು ಪ್ರಮುಖ ಸೈನಿಕ ಚಟುವಟಿಕೆ), ಶತ್ರುಗಳ ಆಕ್ರಮಣ ಮತ್ತು ನಾಡಿಗೆ ವಿಪತ್ತು ನಿವಾರಣ ಸಂದರ್ಭದಲ್ಲಿ ರಾಜ-ಪಾಳೇಗಾರರೊಂದಿಗೆ ಕೈಜೋಡಿಸಿ ಅರೆಕಾಲಿಕ ಸೈನಿಕರಾಗಿ ಯುದ್ದಗಳಲ್ಲಿ ಭಾಗವಹಿಸುತ್ತಿದ್ದರು.





ಆಗ ಈ ರಾಜ/ಆಡಳಿತಗಾರರು ನೆಲೆನಿಂತ ಈ ಗ್ರಾಮೀಣ ಜನರ  ಕೃಷಿಯ ಹೊರೆತು ಪರ್ಯಾಯ ಸಂಪತ್ತಾದ ಪಶುಸಂಗೋಪನೆ ಚಟುವಟಿಕೆಗಳಿಗೆ ಪೂರಕವಾಗಿರಲೆಂದು ಹಾಗು ಶಾಸ್ತ್ರಗಳು ಪ್ರಾಣಿ-ಗಿಡಮರಗಳ ಬಗೆಗಿನ ಹೊಣೆಗಾರಿಕೆ ಮತ್ತು ಗೌರವದ ಬಗ್ಗೆ ಸೂಚಿಸಿರುವ ನಿಯಮ ನಡಾವಳಿಗಳ ಹಾಗು ಪರಂಪರೆಯ ಅನುಗುಣವಾಗಿ, ಆಡಳಿತಗಾರರು, ಗ್ರಾಮಗಳಲ್ಲಿ ನೆಲೆನಿಂತ ಅರೆಕಾಲಿಕ ಸೈನಿಕ ಜನಸಮುದಾಯಕ್ಕೆ ಆಡಳಿತ ಸುಪದ್ರ್ದಿನಲ್ಲಿದ ಹುಲ್ಲುಗಾವಲುಗಳಿಂದ ಕನಿಷ್ಠ 200 ರಿಂದ 500 ಎಕರೆ ವಿಸ್ತೀರ್ಣದ ಭೂಮಿಯನ್ನು ದಾನ-ದತ್ತಿಯಾಗಿ ನೀಡುತ್ತಿದ್ದರಬಹುದು. ಹಾಗೆ ಪಡೆದ ಅಂತಹ ಪ್ರದೇಶಗಳು ಇಂದು ಗೋಮಾಳ, ಹುಲ್ಲು ಬನಿ, ಹುಲ್ಲು ಬಾರೆಗಳಾಗಿವೆ. ಇವುಗಳಲ್ಲಿ ದನ ಕರು, ಕುರಿ, ಮೇಕೆ, ಕುದುರೆ ಹಾಗು ಕತ್ತೆಗಳನ್ನು ಸಲಹುತ್ತ ವಿವಿಧ ಉಪ ಕಸುಬಗಳಲ್ಲಿ ಜನರುಗಳು ತಮ್ಮನು ತೊಡಗಿಸಿಕೊಳ್ಳುತ್ತಿದ್ದರು.

ಕಾವಲುಗಳು (ಹುಲ್ಲುಗಾವಲು): 


ಹಾಗೆ, ಮತ್ತೊಂದಡೆ ರಾಜ-ಪಾಳೆಗಾರರು/
ಆಡಳಿತಗಾರರು ತಮ್ಮ ಆಡಳಿತ ಸುಭದ್ರತೆಗಾಗಿ, ಸೈನ್ಯದ ಯುದ್ಧ-ಆಹಾರ ಸಾಮಾಗ್ರಿಗಳನ್ನು ಸಾಗಿಸಲು ಮತ್ತು ರಾಜಪರಿವಾರಕ್ಕೆ ಅಗತ್ಯವಾದ ಹಾಲು, ಬೆಣ್ಣೆ-ಮೊಸರು ಪೂರೈಕೆಗಾಗಿ, ವಿಶಿಷ್ಠ ತಳಿಯ ಜಾನುವಾರುಗಳನ್ನ (ಹೋರಿ, ದನ, ಹಾಗು ಕುದುರೆಗಳು) ಮೀಸಲಿರಿಸುತ್ತಿದ್ದರು. ಅವುಗಳ ತಳಿ ಸಂವರ್ಧನೆ, ಸಂರಕ್ಷಣೆ ಮತ್ತು ಅಭಿವೃದ್ದಿಗಾಗಿ ದಖ್ಖನ ಮೈದಾನ ಪ್ರದೇಶಗಳಲ್ಲಿ ಮೀಸಲಿಟ್ಟ ಹುಲ್ಲುಗಾವಲುಗಳೇ ‘ಕಾವಲುಗಳು’. 

ಇಲ್ಲಿನ ವೈವಿಧ್ಯಮಯ ಹುಲ್ಲು ಹಾಗು ಸಸ್ಯ ಪ್ರಭೇದಗಳುನ್ನು ನೇರವಾಗಿ ಅಥವ ಪರೋಕ್ಷವಾಗಿ ಅವಲಂಬಿಸಿ ಅಪರೂಪದ ಗ್ರೇಟ್ ಇಂಡಿಯನ್ ಬಸ್ಟರ್ಡ, ಲೆಸ್ಸರ್ ಪ್ಲೊರಿಕಾನ, ಹಾಗು ಇತರೆ ಹುಲ್ಲುಗಾವಲು ಪಕ್ಷಿ-ಕೀಟಗಳು, ಕೃಷ್ಣಮೃಗ, ಚಿರತೆ, ತೋಳ, ನರಿ, ಚಿಪ್ಪುಹಂದಿ, ಮುಳ್ಳುಹಂದಿ, ಮುಂಗಸಿ, ಮೊಲ, ಸಹಿತ ಇತರೆ ವನ್ಯಜೀವಿಗಳ ಇಲ್ಲಿನ ಆವಾಸಿಗಳಾಗಿರುತ್ತ್ತವೆ.



ಅಂದಿನ ವಿಜಯನಗರ ಹಾಗು ಮೈಸೂರು ಆಡಳಿತಗಾರರು ಜಾನುವಾರಗಳು ಮತ್ತು ಕಾವಲುಗಳ ನಿರ್ವಹಣೆಗೆ ‘ಕರುಹಟ್ಟಿ’ ಎಂಬ ಇಲಾಖೆಯನ್ನು ಸ್ಥಾಪಿಸಿದ್ದರು. ಮಾರ್ಕ್ ವಿಲ್ಕ್ಸ ತನ್ನ ‘ಹಿಸ್ಟಾರಿಕಲ್ ಸ್ಕೇಚ್ಸ್ ಆಫ್ ಸೌತ್ ಇಂಡಿಯ’ ಎಂಬ ಪುಸ್ತಕದಲ್ಲಿ ಮೈಸೂರಿನ ಚಿಕ್ಕದೇವರಾಜ ಒಡೆಯರ್, 1672-1704 ರಲ್ಲಿ ಕಾವಲು ಮತ್ತು ಜಾನುವರುಗಳ ಉತ್ತಮ ನಿರ್ವಹಣೆಗೆ ಕರುಹಟ್ಟಿಯನ್ನು ‘ಬೆಣ್ಣೆ ಚಾವಡಿ’ ಎಂದು ಹೆಸರಿಸಿ ಪ್ರತ್ಯೇಕ ಆಡಳಿತಾತ್ಮಕ ಇಲಾಖೆಯನ್ನು ಸ್ಥಾಪಿಸಿದರ ಬಗ್ಗೆ ಬರೆದಿರುತ್ತಾನೆ.

ಮೈಸೂರು ಪ್ರಾಂತ್ಯದ ಗೋಪಾಕರಾದ ಗೊಲ್ಲ ಜನಾಂಗದವರನ್ನು ಬೆಣ್ಣೆಚಾವಡಿಯ ಆಡಳಿತಕ್ಕೆ ಒಳಪಡಿಸಿದ ಚಿಕ್ಕದೇವರಾಜರು. ಗೊಲ್ಲರ ದನಗಳನ್ನೂ ಸೇರಿಸಿದಂತೆ ಬೆಣ್ಣೆಚಾವಡಿಯ ಚಿತ್ತದಲ್ದೂರು, ಹಾಗಲವಾಡಿ ಮತ್ತು ಹಳ್ಳಿಕಾರ ಎಂಬ ವಿಶಿಷ್ಠ ತಳಿದನಗಳನ್ನು ಮೇಯಿಸಲು ಒಟ್ಟು 4,13,539 ಎಕರೆ ವಿಸ್ತೀರ್ಣ 240 ವಿಶಾಲವಾದ ಹುಲ್ಲುಗಾವಲನ್ನು (ಕಾವಲು) ಋತುಮಾನ ಮತ್ತು ಮೇವಿನ ಲಭ್ಯತ್ಯೆ ಅನುಗುಣವಾಗಿ ಮೀಸಲಿರಿಸಿದ್ದರು. ವಿರಳ ಮಳೆಮಾರುತ ಪಡೆಯುವ ದಖ್ಖನ ಮೈದಾನ ಪ್ರದೇಶದ ಕಾವಲುಗಳನ್ನು ಬೆÉೀಸಿಗೆ, ಮಳೆ ಮತ್ತು ಚಳಿಗಾಲದ ಕಾವಲುಗಳಾಗಿ ವಿಂಗಡಿಸಿದ ‘ಬೆಣ್ಣೆ ಚಾವಡಿ’ ಇಲಾಖೆಯು ಈ ಪರಿಸರಾತ್ಮಕ ಕಾರಣಗಳಿಂದಗಿ ತನ್ನ ದನಗಳನ್ನು ಅಲೆಮಾರಿ ಪದ್ಧತಿಯಲ್ಲಿ ಮೇಯಿಸುತ್ತಿತ್ತು. ಬೇಸಿಗೆ ಕಾವಲುಗಳು ಕೆರೆ-ಕಟ್ಟೆ ಪ್ರದೇಶಗಳಿಂದ ಕೂಡಿದ್ದು, ಚಿಗರು ಹುಲ್ಲು ಹುಟ್ಟಿ ಜಾನುವಾರುಗಳಿಗೆ ಮೇವಿನ ಅಗತ್ಯತೆ ಪೂರೈಸುತ್ತಿದ್ದವು. ಅಲ್ಲಿ ಸ್ವಾಭಾವಿಕವಾಗಿ ಹುಟ್ಟಿ ಬೆಳೆದ ಈಚಲು, ಬೇಲ, ಜಾಲಿ ಮುಂತಾದ ಕುರಚುಲು ಜಾತಿಯ ಮರಗಳು ವಾತವರಣದ ಉಷ್ಣತೆಯ ತೀವ್ರತೆಯನ್ನು ಕಡಿಮೆ ಮಾಡಿ ಜಾನುವಾರುಗಳಿಗೆ ನೆರಳಿನ ಆಸರೆಯನ್ನು ನೀಡುತ್ತಿದ್ದವು. ನಂತರ ಹೈದಾರಲಿಯು ವಿವಿಧ ಪ್ರಾಂತ್ಯದ ಪಾಳೇಗಾರರಿಂದ ವಶಕ್ಕೆ ಪಡೆದ ಸುಮಾರು 60,000 ಸಾವಿರ ರಾಸುಗಳನ್ನು ಯುದ್ದಗಳಲ್ಲಿ ಬಳಸುತ್ತಿದ್ದನು. ಬೆಣ್ಣೆಚಾವಡಿಯು ಹೆಸರನ್ನು ನಂತರದಲ್ಲಿ ಅಮೃತ್ ಮಹಲ್ ಎಂದು ಬದಲಿಸಿದ ಟಿಪ್ಪು ಸುಲ್ತಾನ್, ಇವುಗಳ ನಿರ್ವಹಣೆ ಮತ್ತು ಅಭಿವೃದ್ದಿಗೆ ವಿಶೇಷ ಕಾಳಜಿವಹಿಸಿ ಯುದ್ದಗಳಲ್ಲಿ ಈ ರಾಸುಗಳನ್ನು ಬ್ರಿಟೀಷರ ವಿರುದ್ದ ಪರಿಣಾಮಕಾರಿಯಾಗಿ ಬಳಸಿದ್ದನು. ಅಂದಿನ ದಿನಗಳಲ್ಲಿ ರಾಜನೀತಿಜ್ಞರ ಕಣ್ಮಣಿಯಾಗಿದ್ದ ಈ ರಾಸುಗಳು ಮತ್ತು ಕಾವಲುಗಳು  1799ರಲ್ಲಿ ಬ್ರಿಟೀಷರ ಆಡಳಿತಕ್ಕೆ ಒಳಪಟ್ಟಿತು. 1813 ರಿಂದ 1923 ಬ್ರಿಟೀಷರ ಸ್ಥಳಿಯ ಜನ ವಿರೋಧಿ ಆರ್ಥಿಕ ನೀತಿಗಳಿಂದ ನಲುಗಿದ  ಅಮೃತ್ ಮಹಲ್ ಇಲಾಖೆಯು ತನ್ನ ಆಡಳಿತ ಮತ್ತು ನಿರ್ವಹಣೆಯಲ್ಲಿ ಬಹಳಷ್ಟು ಏರುಪೇರು ಕಂಡ ಹೆಚ್ಚನ ರಾಸು ಹಾಗು ಕಾವಲುಗಳನ್ನು ಕಳೆದು ಕೊಂಡಿತು. 1923 ರಲ್ಲಿ ಕೃಷಿ ಇಲಾಖೆಗ ಸೇರಿ 1944 ನಂತರ ಪಶು ಪಾಲನ ಮತ್ತು ಪಶು ವೈದ್ಯಕೀಯ ಇಲಾಖೆ ನಿರ್ವಹಣೆಯಲ್ಲಿದೆ.


ಸದ್ಯೆ ಈ ಕಾವಲು ಪ್ರದೇಶಗಳು ಕರ್ನಾಟಕದ ದಕ್ಷಿಣ ದಖ್ಖನ ಮೈದಾನ ಪ್ರದೇಶದ ಐದು ಜಿಲ್ಲೆಗಳಾದ ಚಿತ್ರದುರ್ಗ, ತುಮಕೂರು, ಹಾಸನ, ಮಂಡ್ಯ, ಚಿಕ್ಕಮಗಳೂರು, ದಾವಣಗೆರೆ ಜಿಲ್ಲೆಗಳಲ್ಲಿ ಮಾತ್ರ ಸಂಮೃದ್ದವಾಗಿ ಕಂಡುಬಂದಿದ್ದು, ಉತ್ತರ ದಖ್ಖನ ಮೈದಾನ ಪ್ರದೇಶದ ಕಾವಲುಗಳು ನೀಜಾಮರ ಕಾಲದಲ್ಲಿ ಕೃಷಿಗಾಗಿ ಸಂಪೂರ್ಣ ಭೂಮಿಯನ್ನು ಬಳಸಿರುವುದು ಕಂಡುಬರುತ್ತದೆ. ಇಂತಹ ಸಮುದಾಯಿಕ ನೆಲಗಳಾದ ಗುಂಡು ತೋಪು, ಗೊಮಾಳ ಮತ್ತು ಕಾವಲುಗಳನ್ನು ಪರಿಪೂರ್ಣವಾಗಿ ಅವಲಂಬಿಸಿ ಪಶುಪಾಲನಾ ಸಂಸ್ಕೃತಿ ಹಿನ್ನಲೆಯುಳ್ಳ ಮತ್ತು ಪಶುಸಂಗೋಪನೆಯನ್ನು ಮೂಲ ವೃತ್ತಿಯನ್ನಾಗಿಸಿಕೊಂಡ ಹಲವು ಸಮುದಾಯಗಳು (ಗೊಲ್ಲರು, ಕುರುಬರು, ಲಂಬಾಣಿ ಅಥವ ಬಂಜಾರರು) ಅರಳಿದವು.  ಅವರುಗಳು ತಮ್ಮ ಪಶು-ಪ್ರಾಣಿ ಸಂಪತ್ತನ್ನು ಪ್ರಾಕೃತಿಕವಾಗಿ ಬಂದ ಅನುಭವ ಜ್ಞಾನ ಶ್ರೀಮಂತಿಕೆಯಿಂದ ಅಭಿವೃದ್ದಿಪಡಿಸಿದರು. ಅವುಗಳಲ್ಲಿ ವಿಶ್ವಪ್ರಸಿದ್ದ ಅಮೃಮಹಲ್. ಕಿಲಾರಿ, ದೆವಣಿ, ಕೃಷ್ಣವ್ಯಾಲಿ, ಹಳ್ಳಿಕಾರ್, ಚಳ್ಳೆಕೆರೆ ಕರಿಕುರಿ, ಬನ್ನೂರು ಮರಿ, ಹೀಗೆ ಹಲವಾರು ತಳಿಗಳನ್ನು ಜಗತ್ತಿಗೆ ನೀಡಿದ ಕೊಡುಗೆಗಳಾಗಿವೆ. 

ಇತ್ತೀಚಿನವರೆಗು ಪಶು-ಪ್ರಾಣಿಗಳಿಗಾಗಿ ಹಾಗು ಅವುಗಳನ್ನು ಅವಲಂಬಿಸಿದ ಸಮುದಾಯಗಳ ಸುರಕ್ಷಿತ ಮತ್ತು ಸಂರಕ್ಷಿತ ಬದುಕಿಗಾಗಿ ಮೀಸಲರಿಸಿದ್ದ ಈ ಸಮೃದ್ದ ಗೋಮಾಳ, ಹುಲ್ಲುಬನ್ನಿ, ಹುಲ್ಲುಗಾವಲು, ಹುಲ್ಲುಬಾರೆ ಹಾಗು ಕಾವಲು ಭೂಮಿಗಳು, ನಾಡಿನ ಗ್ರಾಮೀಣ ಸಮುದಾಯಗಳ ಮತ್ತು ರಾಜ್ಯದ ಸಂಪತ್ತಿನ ಸೂಚಕವಾಗಿದ್ದವು. ಹಾಗೆ, ಪರಿಸರಾತ್ಮಕವಾಗಿ, ಹುಲ್ಲುಗಾವಲು ಪ್ರಾಣಿ, ಪಕ್ಷಿ, ಕೀಟ ಸಂಕುಲಗಳ ಆಶ್ರಯ ತಾಣವಾಗಿ, ಜಲ ಮೂಲವಾಗಿ, ಕಟ್ಟಿಗೆ, ಮೇವಿನ ನೆಲವಾಗಿ ಧಾರ್ಮಿಕ ಮತ್ತು ಸಂಸ್ಕøತಿಕವಾಗಿ ಮನುಷ್ಯನ ಮನಸ್ಸಿಗೆ ಮುದ ನೀಡುವ ಬೆಡಗಿನ ತಾಣಗಳಾಗಿವೆ. ಉದಾ: ತಿಪಟೂರಿನ ಬಿದಿರಮ್ಮನಗುಡಿ ಕಾವಲು ಹಾಗು ಅಲ್ಲಿನ ಕಾವಲು ಬಂಧಮ್ಮ, ಚಳ್ಳೇಕೆರೆಯ ಕುದಾಪುರದ ಅಜ್ಜಯೈನ ಗುಡಿ, ಮತ್ತು ಹಾಸನ ರಾಯಸಂದ್ರ ಕಾವಲಿನ ಅಮರಗಿರಿ ರಂಗಯ್ಯನ ಗುಡಿ. ಉಳಿದಿರುವ ಈ ಅಲ್ಪ ಸಮುದಾಯಿಕ ನೆಲೆಗಳನ್ನು ಆಶ್ರಯಿಸಿರುವ ಚಳ್ಳೇಕೆರೆ, ಸಿರಾ, ಮಧುಗಿರಿ, ಕೊರಟಗೆರೆ, ಪಾವಗಡ, ಹಿರಿಯೂರು ಭಾಗದ ಬಹುತೇಕ ಕುರಿಗಾಹಿ ಸಮುದಾಯಗಳು ತಮ್ಮ ಜಾನುವಾರುಗಳೊಂದಿಗೆ ಹಾಸನ, ಮೈಸೂರು, ಮಂಡ್ಯ, ಚಿಕ್ಕಮಗಳೂರು ಹಾಗು ದಾವಣಗೆರೆ ಜಿಲ್ಲೆಗಳಿಗೆ ಮೇವು-ನೀರಿಗಾಗಿ ಚಳಿಗಾಲ ಮತ್ತು ಬೇಸಿಗೆ ಕಾಲದ ಕಾವಲುಗಳಿಗೆ ವಲಸೆಹೋಗುವ ಪರಿಪಾಟವನ್ನು ಇಂದಿಗು ಮುಂದುವರಿಸುತ್ತಿವೆ.



ಕೊನೇಹಳ್ಳಿಯ ಬಿದಿರಮ್ಮನಗುಡಿ ಕಾವಲಿನಲ್ಲಿ ಅವನತಿಯ ಅಂಚಿನಲ್ಲಿರುವ ಕೃಷ್ಣಮೃಗ, ತೋಳ, ಕತ್ತೆಕಿರುಬ, ನರಿ ಹಾಗು ಬಿಲ ಮತ್ತು ಗೂಡುಗಳಲ್ಲಿ ವಾಸಿಸುವ ಮುಳ್ಳುಹಂದಿ, ಮೊಲ, ಹಾವು ಇತ್ಯಾದಿ ಪ್ರಾಣಿಗಳು, 40 ಕ್ಕೂ ಹೆಚ್ಚು ವೈವಿಧ್ಯಮಯ ಚಿಟ್ಟೆ, 70 ಕ್ಕೂ ಹೆಚ್ಚು ಪಕ್ಷಿ ಹಾಗು ಕೀಟ ಸಂಕುಲಗಳು, 278 ಕ್ಕೂ ಹೆಚ್ಚು ಸಸ್ಯಸಂಕುಲಗಳು ಈ ಹುಲ್ಲುಗಾವಲಿನ ಜೈವಿಕ ಪರಿಸರ ವ್ಯವಸ್ಥೆಯಲ್ಲಿ ಆವಾಸಿ ಹಾಗು ಪ್ರಮುಖ ಕೊಂಡಿಗಳಾಗಿರುವುದು ಕಂಡುಬರುತ್ತದೆ. ಅಧ್ಯಯನದಲ್ಲಿ ಕನಿಷ್ಟ 40 ಹುಲ್ಲಿನ ಪ್ರಭೇದಗಳು ಕಂಡುಬಂದಿರುತ್ತದೆ. ಇವುಗಳು ಇಲ್ಲಿನ ಜೈವಿಕ ಪರಿಸರ ವ್ಯವಸ್ಥೆಯಲ್ಲಿ ಪರಿಣಾಮಕಾರಿ ಪಾತ್ರವಹಿಸಿದ್ದು, ಮಳೆ ನೀರು ಇಂಗಿಸುವದು, ಮಣ್ಣು ಸವಕಳಿ ತಡೆಯುವುದು, ಮಣ್ಣಿನಲ್ಲಿ ಜೈವಿಕ ಪ್ರಕ್ರಿಯೆಗೆ ಪೂರಕವಾಗಿರುವಂತೆ ತೇವಾಂಶ ಹಿಡಿದಿಡುವುದು, ಸಸ್ಯ ಆಹಾರಿ ಪ್ರಾಣಿಗಳಿಗೆ ಆಹಾರವಾಗುವುದು, ಪಕ್ಷಿ-ಕೀಟಗಳಿಗೆ ಆಶ್ರಯ ನೀಡುವುದು ಮುಂತಾದ ಪರಿಸರ ಸೇವೆ ಮಾಡುತ್ತಿರುತ್ತದೆ. ಸಮಾನ್ಯವಾಗಿ ಈ ಹುಲ್ಲು ಪ್ರಭೇದಗಳಲ್ಲಿ ವರ್ಷಗಟ್ಟಲೆ ಬಾಳುವ ಮತ್ತು ಋತುಮಾನಕ್ಕೆ ಮಾತ್ರ ಸೀಮಿತವಾದ ಹುಲ್ಲು ಪ್ರಭೇದಗಳು ಇರುತ್ತವೆ. ಪ್ರತಿ ಹುಲ್ಲು ಪ್ರಭೇದ ತನ್ನದೆ ಆದ ಖನಿಜ ಮತ್ತು ಪೊಷಕಾಂಶಗಳು ಒಳಗೊಂಡಿರುತ್ತದೆ. ತುಮಕೂರು ಜಿಲ್ಲೆಯಲ್ಲಿರುವ ಕಾವಲುಗಳಲ್ಲಿ ಮಣ್ಣಿನ ಸ್ವಭಾವ ಗುಣದಿಂದ ಮತ್ತು ಅಲ್ಪ ಮಳೆಯ ಮಾರುತದಿಂದಾಗಿ ವರ್ಷಗಟ್ಟಲೆ ಬಾಳುವ ಹುಲ್ಲು ಪ್ರಭೇದಗಳು ಪ್ರಧಾನವಾಗಿದ್ದು, ಋತುಮಾನದ ಪ್ರಭೇದಗಳು  ಬಹು ವಿರಳವಾಗಿರುವುದು ಕಂಡು ಬರುತ್ತದೆ. 


ಸಮುದಾಯಿಕ ನೆಲಗಳನ್ನು ನಿಶ್ಚಯದಿಂದ ನಿರೂಪಿಸುವ, ಕಾಯ್ದೆ, ನಿಯಮ ಮತ್ತು ರಾಜ್ಯಭಾರ ಕ್ರಮಗಳು


ಭೂ ಬಳಕೆಯ ವಿಧಾನ

ಪ್ರವೇಶಾಧಿಕಾರ

ಹಕ್ಕುಗಳು

ನಿಯಂತ್ರಿಸುವ ಇಲಾಖೆ

ಜ್ವಲಂತ ಸ್ಥಿತಿ-ಗತಿ







ಅಮೃತ್ ಮಹಲ್ ಕಾವಲುಗಳು
  •  ಸೆಕ್ಷನ್ 33, ಕರ್ನಾಟಕ ಅರಣ್ಯ ಕಾಯ್ದೆ 1963 
  • ಸೆಕ್ಷನ್ 33, ಕರ್ನಾಟಕ ಅರಣ್ಯ ನಿಯಮ,1969 
  • ಸೆಕ್ಷನ್ 39 ಕರ್ನಾಟಕ ಕಂದಾಯ ಕಾಯ್ದೆ,1964 (ಕ.ಕ.ಕಾ 1964 ರ 12)
  • ರಾಜ್ಯ  ಸರ್ಕಾರ ಸೆಕ್ರೇಟೇರಿಯೆಟ್ ಸುತ್ತೋಲೆ ಸಂಖ್ಯೆ 
  • AAHHVLS79 ದಿನಾಂಕ 19/22.03.1979 
  • ಕರ್ನಾಟಕ  ಸರ್ಕಾರದ ಕಂದಾಯ ಇಲಾಖೆಯ ಮುಖ್ಯ ಕಾರ್ಯದರ್ಶಿರವರ ಸುತ್ತೋಲೆ ಸಂಖ್ಯೆ ಖಆ 3ಐಉP 95 
  • ಭೂಕಂದಾಯ ಕಾಯ್ದೆ(kar Act 12 of 1964)
  • ದಿನಾಂಕ 20.3.2001 ಕರ್ನಾಟಕದ ಉಚ್ಚ ನ್ಯಾಯಾಯದ ಪ್ರತಿ ಅಹವಾಲ್ಗೆ ನೀಡಿದ ತೀರ್ಪಿನ ಸಂಖ್ಯೆ 17954/1997 
  • ಕಾನೂನು ಇಲಾಖೆ ಅಭಿಪ್ರಾಯಗಳ ಸಂಖ್ಯೆ : AHF 07 AMBHU 2001, ದಿನಾಂಕ ಮತ್ತು ಸಂಖ್ಯೆ : 818 ಅಭಿಪ್ರಾಯ - iii 2003

ಪಶು ಪಾಲನ ಇಲಾಖೆಯಿಂದ ತಳಿ ಸಂವರ್ದನೆ

ಹುಲ್ಲುಗಾವಲು, ಇತರೆ ಮರ-ಮಕ್ಕಿಗಳು, ಮೇವು ಬಾರೆ,

ನಿಯಂತ್ರಿತ

ಅಲೆಮಾರಿ ಕುರಿಸಾಕಣೆದಾರರು ಮತ್ತು ಸ್ಥಳಿಯರಿಗೆ ಕೆಲವು ತಿಂಗಳು ಮಾತ್ರ ಸೆಸ್  ಆದರದಲ್ಲಿ ನಿಯಂತ್ರಿತ ಮೇವು ಬಳಕೆ.


ಪಶು ಪಾಲಸ ಮತ್ತು ಪಶು ವೈದ್ಯಕೀಯ ಸೇವ ಇಲಾಖೆ ಹಾಗು ಅರಣ್ಯ ಇಲಾಖೆ

ಬಹುತೇಕ ಕೃಷಿಗಾಗಿ ಒತ್ತುವರಿಯಾಗಿರುತ್ತದೆ

ಹಲವು ಕಾವಲುಗಳನ್ನು ಕಂದಾಯ ಇಲಾಖೆಯು ಭೂ ಬ್ಯಾಂಕ್, ಕೈಗಾರಿಕೆ ಇಲಾಖೆ ಹಾಗು ಸಂಸ್ಥೆಗಳಿಗೆ ಅನಧಿಕೃತ ಪರಭಾರೆ,

ಅರಣ್ಯ ಮತ್ತು ಪಶು ಪಾಲನ ಇಲಾಖೆಯಡಿ ನಿರ್ವಹಣೆಯಾಗುತ್ತಿರುವದು




ಗೋಮಾಳ

  • ಸ. ಆ. ಸಂ – 20588-ಆರ್ ಎಫ್., 139-92,.1. 1 ಜೂನ್ 1893,
  • ಸ. ಆ. ಸಂ – ಆರ್973 ಎಫ್.ಟಿ 88-15-22, ದಿ. 27 ಜುಲೈ 1971
  • ಸೆ-72, ಕರ್ನಾಟಕ ಭೂ ಕಂದಾಯ ಕಾಯ್ದೆ, 1964
  • ಸೆ-97, ಕರ್ನಾಟಕ ಅರಣ್ಯ ನಿಯಮ, 1966.
  • ಮೈಸೂರು ಭೂ ಕಂದಾಯ ಕಾಯ್ದೆ,1902

ಹುಲ್ಲುಗಾವಲು, ಇತರೆ ಮರ-ಮಕ್ಕಿಗಳು, ಮೇವು ಬಾರೆ,
ಖರಾಬು ?


ಪ್ರವೇಶ ಅನಿರ್ಭಂದಿತ.

ಸೌದೆ, ಸ್ವ ಬಳಕೆಗೆ ಮೇವು 

ಕಂದಾಯ ಇಲಾಖೆ

ಸಮಾಜಿಕ ಅರಣ್ಯದಡಿ ಇಲ್ಲದ್ದಿದರೆ ಖರಾಬ ಎಂದು  ಪರಿಗಣಿಸುವುದು,
ಒತ್ತುವರಿಯಾಗಿರುತ್ತದೆ,
ಹಲವು ಗೋಮಾಳಗಳನ್ನು ಭೂ ಬ್ಯಾಂಕ್ ಮತ್ತು ಕೈಗಾರಿಕ ವಸಹತುಗಳಿಗೆ ಸ್ಥಳಿಯರ ಅನುಮತಿ ಪಡೆಯದೆ ನೀಡಿರಲಾಗಿರುತ್ತದೆ

( ¸ÀAUÀæºÀ ªÀÄÆ®: ¥À±ÀÄ ¥Á®£À E¯ÁSÉ, CgÀtå E¯ÁSÉ, ªÉÄÊvÀæAiÀÄ, ¥À²ÑªÀÄ WÀlÖ PÁgÀå¥ÀqÉ 2011 : CªÀÄÈvï ªÀĺÀ¯ï ªÀgÀ¢, ºÁUÀÄ ¯ÉïÉ, PÀ±Àå¥À ªÀÄvÀÄÛ ¥ÀÄgÀĵÉÆÃvÀÛªÀÄ, 2008.


ನಾಡಿನ ಬಹುತೇಕ ಗ್ರಾಮೀಣ ಬಡ ಜನರು ತಮ್ಮ ಜೀವನೋಪಯಕ್ಕೆ ಈ ಗೋಮಾಳ ಹಾಗು ಕಾವಲುಗಳನ್ನು ಅವಲಂಬಿಸಿದ್ದರು ಕೂಡ ಈ ಸಮುದಾಯದ ಆಸ್ಥಿಗಳನ್ನು ಕೇವಲ ಸರ್ಕಾರಿ ಬಳಕೆಯ ನೆಲ/ಭೂಮಿ ಯೆಂದು ಸರ್ಕಾರಗಳು ಪರಿಗಣಿಸುತಾ ಬಂದಿರುವುದು ಒಂದು ವಿಪರ್ಯಾಸ.  ಕಾಡುಗಳನ್ನು ಸಂರಕ್ಷಿಸುವುದೆಂದರೆ ಶಾಸ್ರಿಯವಾಗಿ ಕೇವಲ ಮರಗಳಿರುವ ಜಾಗವೆಂಬ ಮುಗಿನ ನೇರದ ದೃಷ್ಠಿಕೋನವು ಕೂಡ ಹುಲ್ಲು ಕಾವಲುಗಳು ಮತ್ತು ಗೋಮಾಳಗಳ ಅವನತಿಗೆ ಪರೋಕ್ಷ ಕಾರಣವಾಗಿದೆ. ಇವುಗಳನ್ನು ಸಾಮಾನ್ಯವಾಗಿ “ಅನುಪಯುಕ್ತ” ವೆಂದು ಬಿಂಬಿಸುತ್ತ ಇವುಗಳನ್ನು ಕೈಗಾರಿಕೆ ಮತ್ತು ಇತರೆ ಉದ್ದೇಶಗಳಿಗೆ ನೀಡಲು ಜನಪ್ರತಿನಿಧಿಗಳು ಮತ್ತು ಕಂದಾಯ ಇಲಾಖೆಯು ಸುಲಭ ದಾರಿಮಾಡಿಕೊಂಡಿದ್ದು, ಇತ್ತೀಚಿನ ದಿನಗಳಲ್ಲಿ ಬಹುತೇಕ ಗುಂಡು ತೋಪು, ಗೋಮಾಳ ಹಾಗು ಕಾವಲುಗಳನ್ನು ಮನಸೋಇಚ್ಚೆಯಗಿ ಹಾಗು ಸ್ಥಳಿಯ ಆಡಳಿತ ಅಥವ ಜನಸಮುದಾಯಗಳ ಗಮನಕ್ಕೆ ತಾರದೆ ಭಾರಿ ಕೈಗಾರಿಕ ವಸಹತು ಮತ್ತು ಸರ್ಕಾರಿ ಸಂಸ್ಥೆಗಳಿಗೆ ಪರಭಾರೆ ಮಾಡುತ್ತಿರುವುದು ಈ ನೆಲ-ಜಲ-ಜನ-ಜೀವನ ಸಂಸ್ಕೃತಿಯ ಮೇಲಿನ ಅತಿ ದೊಡ್ಡ ದೌರ್ಜನ್ಯವಾಗಿದೆ. 

ಇಂತಹ ಆತುರದ ನಿರ್ಧಾರಗಳು ಈ ನೈಸರ್ಗಿಕ ಸಂಪನ್ಮೂಲಗಳ ಮೇಲೆ ಅವಲಂಬಿಸಿರುವ ಗ್ರಾಮೀಣ ಬಡ ಸಮುದಾಯ ಮತ್ತು ಪ್ರಾಣಿ-ಜಾನುವಾರುಗಳ ಮೇಲೆ ವಿಪರೀತ ಪರಿಣಾಮ ಬೀರುತ್ತಿವೆ. ಇದರ ಫಲಿತಾಂಶವಾಗಿ ಜಿಲ್ಲೆಯ ಸಿರಾ ತಾಲ್ಲೂಕಿನ ಆಕಳು ತಳಿಯಾದ ಹಾವುಗೂಡು ಮತ್ತು ಹಾಗಲವಾಡಿ ತಳಿಗಳು (ಜೆನಿದನ ಅಥವ ದೇವರ ದನ) ನಾಶವಾಗುತ್ತಿರುವದು ಮತ್ತು ಸಾವಿರಾರು ಕುರಿ ಸಾಕಣಿಕೆದಾರರು ಮೇವಿನ ತಾಣವಿಲ್ಲದೆ ತಮ್ಮ ದನಕುರಿಗಳನ್ನ ಮಾರಿಕೊಳ್ಳುತ್ತಿರುವದು ಪ್ರತ್ಯಕ್ಷ ಸಾಕ್ಷಿಯಾಗಿದೆ. 


ವಿಶಿಷ್ಠ ಜೀವವೈವಿಧ್ಯ ಭರಿತ ಈ ಸಮುದಾಯ ನೆಲಗಳನ್ನ ಕಾಪಡುವುದರ ಬಗೆ ಸರ್ಕಾರಗಳ ಯಾವುದೇ ದೂರದೃಷ್ಠಿಯಿಲ್ಲದ ಕಾರ್ಯವೈಖರಿಗಳ ಪರಿಣಾಮವಾಗಿ ನೂರಾರು ವರ್ಷಗಳ ನಿರಂತರ ಪರಿಶ್ರಮದ ಅನಭವದಿಂದ ಬೆಳೆದಬಂದ ಶ್ರೀಮಂತ ಸಂಸ್ಕೃತಿ ಪರಂಪರೆಯನ್ನು ಕಳೆದುಕೊಂಡಂತಾಗಿದೆ. ಕಾವಲುಗಳ ಬಳಕೆಗಿರುವ ಅಸ್ಪಷ್ಟ ಕಾರ್ಯನೀತಿಗಳು ಬಹಳಷ್ಟು ತೊಡುಕಾಗಿದ್ದು ಸ್ಥಳಿಯ ಸಮುದಾಯಗಳ ಹಕ್ಕುಗಳನ್ನು ದಮನಮಾಡುತ್ತಿದೆ.  ಪರಿಣಾಮವಾಗಿ ಇದು ಬಯಾಲಜಿಕಲ್ ಡೈವರಸಿಟಿ ಕಾಯ್ದೆಯಡಿ ಸಂರಕ್ಷಿಸಲಾಗುತ್ತಿರುವ ಪಾರಂಪರಿಕ ಜ್ಞಾನ ಮತ್ತು ಪ್ರಜ್ಞೆಗೆ ಬಹುಮುಖ್ಯ ಅಂಶವಾಗಿರುವ ಸಾಂಪ್ರದಾಯಿಕ ಜಾನುವಾರು ಪಾಲಕರ ಪಾಲನ ಸಾರ್ಮಥ್ಯವನ್ನು ಕುಗ್ಗಿಸಿರುತ್ತದೆ. 

ಒಂದಡೆ ಕಾವಲುಗಳ ಜೊತೆಜೊತೆ ಜೀವನೋಪಾಯದ ಹಕ್ಕುಗಳು ಕಳೆದುಕೊಳ್ಳುತ್ತಿರುವ ಮತ್ತು ಜಾನುವಾರು ಪಾಲಕರ ಅರ್ಥಿಕ ಸ್ಥಿತಿಯ ಹಾಳಾಗುತ್ತಿರುವ ಸಂದರ್ಭದಲ್ಲಿ ಬಯಾಲಜಿಕಲ್ ಡೈವರಸಿಟಿ ಕಾಯ್ದೆ 2002 ಮತ್ತು ಅರಣ್ಯ ಬಳಕೆಯ ಹಕ್ಕು ಕಾಯ್ದೆ, 2002 ನೀಡಿರುವ  ಹಕ್ಕುಗಳನ್ನು ಬಳಸಿಕೊಳ್ಳಲು ಸ್ಥಳೀಯ ಸುಮುದಾಯ ಜನರಗಳ ಆಡಳಿತ ಮತ್ತು ನಿರ್ವಹಣೆ  ಸಮಾಥ್ರ್ಯ ನಿರ್ಮಾಣದಡೆ ಸರ್ಕಾರವು ಕಿಂಚಿತ್ತು ಗಮನ ಹರಿಸಿರುವುದಿಲ್ಲ. ಅರಣ್ಯ ಬಳಕೆ ಹಕ್ಕು ಸಮಿತಿ ಹಾಗು ಜೀವವೈವಿಧ್ಯತೆ ನಿರ್ವಹಣೆ ಸಮಿತಿಗಳನ್ನು ಈ ನೆಲದ ಕಾನೂನಿನ ಆಶಯದಂತೆ ರಚಿಸದೆ ಸ್ಥಳಿಯ ಸಮುದಾಯಜನರ ಮೂಲಭೂತಹಕ್ಕಗಳೊಂದಿಗೆ ರಾಜಿಮಾಡಿಕೊಂಡಿರುವುದು ತೀವ್ರ ಗಂಭೀರಸ್ವರೂಪವಾಗಿದ್ದು, ಎಲ್ಲಾದಕ್ಕು ಮಿಗಿಲಾಗಿ ಇಂತಹ ಅಮೂಲ್ಯ ಪ್ರದೇಶಗಳ ನಿರ್ವಹಣೆ ಜ್ಞಾನವನ್ನು ಕಳೆದು ಕೊಂಡಂತಾಗಿದೆ 


ನೀರಿನ ಪ್ರಮುಖ ಸೆಲೆಗಳಾಗಿ ಜೀವವೈವಿಧ್ಯತೆಯನ್ನು ಸಲಹುತ್ತಿರುವ ತೊಟ್ಟಿಲಾಗಿರುವ ಈ ಸಮುದಾಯದ ನೆಲಗಳನ್ನು ನಾವು ಇಂದು ಪ್ರಜ್ಞಾಪೂರ್ವಕವಾಗಿ ಜೀವವೈವಿಧ್ಯತೆಯ ಸ್ವರ್ಗವಾಗಿ ಸಂರಕ್ಷಿಸುವುದು ಬಹುಮುಖ್ಯವಾಗಿದೆ. ಅಪಾಯದ ಅಂಚಿನಲ್ಲಿರುವ ಜಿಲ್ಲೆಯ ಪ್ರಮುಖ ಗುಂಡು ತೋಪು, ಗೋಮಾಳ ಮತ್ತು ಹುಲ್ಲು ಕಾವಲುಗಳನ್ನು ಗುರುತಿಸಿ ರಕ್ಷಿಸಲು ಸಮುದಾಯಗಳನ್ನು ಒಳಗೊಡಂತೆ ಕ್ರಮಕೂಗೊಳ್ಳುವುದು, ಗ್ರಾಮ ಅಭಿವೃದ್ದಿ ಮತ್ತು ಜಿಲ್ಲಾ ಯೋಜನ ಕಾರ್ಯಕ್ರಮಗಳನ್ನು ರೂಪಿಸುವ ಕಾನೂನು ಮತ್ತು ಕಾರ್ಯಸೂಚಿಗಳಲ್ಲಿ ಗೋಮಾಳ ಹಾಗು ಹುಲ್ಲುಕಾವಲುಗಳನ್ನು ಅಭಿವೃದ್ದಿ ಯೋಜನೆಗಳನ್ನು ಸೇರಿಸುವುದು, ಹಾಗೆ ಸಮುದಾಯಗಳ ಜೀವನೋಪಾಯ ಮತ್ತು ಉಳಿಯುವಿಕೆಯನ್ನು ಒಳಗೊಂಡಂತೆ ಇವುಗಳ ನಿರ್ವಹಣೆಯನ್ನು ಪಾರಂಪರಿಕ ಜೀವವೈವಿಧ್ಯತೆಯ ಸಂರಕ್ಷಿತ ತಾಣ ವೆಂಬ ಟ್ಯಾಗನಡಿ ಸಂರಕ್ಷಿಸಿ ಉಳಿಸಬೇಕಾಗಿದೆ.


ಗ್ರಂಥ ಋಣ 

1. ಅಮೃತಮಹಲ್  ತಳಿ - ಚಂದ್ರಶೇಖರ್ ಕುಣಜಿ, ಪ್ರಕೃತಿ ಪ್ರಕಾಶನ,1998
2. ಏಷಿಯ ಬಿಫೋರ್ ಯುರೋಪ್: ಅನಿಮಲ್ಸ ಅಂಡ್ ಮಾಸ್ಟರ್ಸ್, ಪುಟ 294. ಕೆ.ಎನ್.ಚೌಧರಿ 
3. ಏಷಿಯ ಬಿಫೋರ್ ಯುರೋಪ್: ಎಕಾನಮಿ ಅಂಡ್  ಸಿವಿಲೈಸೇಷನ್ ಅಫ್s ದ ಇಂಡಿಯನ್ ಒಶನ್ ಫ್ರಮ್ ದ ರೈಸ್ ಆಫ್ ಇಸ್ಲಂ ಟು 1750, ಕೆಂಬ್ರೀಜ್ ಯುನಿವರ್ಸಿಟಿ , ಪುಟ 294 ಕೆ.ಎನ್.ಚೌಧರಿ 
4. ಎ ಜರ್ನಿ ಫ್ರಂ ಮದ್ರಾಸ್ ಟು ದ ಕಂಟ್ರೀ ಅಫ್ ಮೈಸೂರ್, ಕೆನರ ಅಂಡ್ ಮಲಬಾರ್- ಫ್ರಾನ್ಸಿಸ್ ಬುಚ್ನಾನ್ 
5. ಕೌಸ್ ಇನ್ ಇಂಡಿಯ 632.2 ದಾಸ್ ಗುಪ್ತ 
6. ಅರ್¯ ರೆಕಾಡ್ಸ್ರ್ಸ ಅಫ್s ಬ್ರಿಟೀಷ್ ಇಂಡಿಯ- ಮಿಲಿಟರಿ ಕನ್ಸಲ್ಟೇಂಟ್ ಅಂಡ್  ಮಿಲಿಟರಿ ಕಂಟ್ರಿ ಕರೆಸ್ಪ್ಪಾಂಡೆನ್ಸ (1760-1761) 
7. ಫಾರ್ಮರ್ ಆಫ್ ಇಂಡಿಯ, ಆಂದ್ರ ಪ್ರದೇಶ, ಮೈಸೂರ್ ಅಂಡ್ ಕೇರಳ. ಎಂ.ಎಸ್. ರಾಂಧವ ಪುಟ 250 
8. ಹಿಸ್ಟರಿ ಅಫ್s ಮೈಸೂರ್ ಸಂಪುಟ-1 ಪುಟ 793 
9. ಕರ್ನಾಟಕ ಗೆಜೇಟಿಯರ್, ಸಂಪುಟ-17 1965 
10. ಮೈಸೂರ್: ಗೆeóÉಟಿಯರ್ ಕಂಪೈಲ್ಡ್ ಫಾರ್ ಗೌರ್ನಮೇಂಟ್. ಬಿ. ಎಲ್ ರೈಸ್ 
11. ಇನವೆಸ್ಟಿಗೇಷನ್ ಇನ್ ಟು ದ ನಿಯೋಲಿತಿಕ್ ಕಲ್ಚ್‍ರ್ ಅಫ್ ದ ಶೋರಪುರ ಡೊಬ, ಸೌತ್ ಇಂಡಿಯ, ಕೆ. ಪದ್ದಯ್ಯ 1973.
12. ಬರಗೂರು, 2011, ಪರಿಸರ ಜಿಜ್ಞಾಸೆ, ಅಭಿರುಚಿ ಪ್ರಕಾಶನ.
13. ಲೇಲೆ, ಕಶ್ಯಪ್, ಅಂಡ್ ಪುರುಷೋತ್ತಮ್, 2008, ಸ್ಟೇಟಸ್ ಪೇಪರ್ ಆನ್ ದ ಕಾಮನ್ ಲ್ಯಾಂಡ್ಸ ಇನ್ ಕರ್ನಾಟಕ.
14. ಶ್ರಿನಿಧಿ ಅಂಡ್ ಲೇಲೆ, 2001, ಫಾರೆಸ್ಟ್ ಟೇನ್ಯೂರ್ ರೇಜಿಮ್ಸ್ ಇನ್ ದ ಕರ್ನಾಟಕ ಅಂಡ್ ದ ವೆಸ್ಟರ್ನ್ ಘಾಟ್ಸ್: ಅ ಕಾಂಪೇನ್ಡಿಯಮ್.
15. ವಿಲ್ಕಸ್, ಎಮ್1817, ಹಿಸ್ಟಾರಿಕಲ್ ಸ್ಕೆಚ್ಸ್ ಆಫ್ ದ ಸೌತ್ ಆಫ್ ಇಂಡಿಯ, (ಲಂಡನ್)
16. ನಾಡಕರಣಿ, ಎಂ.ವಿ., 1990. ಯೂಸ್ ಅಂಡ್ ಮ್ಯಾನೇಜ್‍ಮೆಂಟ್ ಆಫ್ ಕಾಮನ್ ಲ್ಯಾಂಡ್ಸ: ಟುವರ್ಡ ಎನಿವಿರಾನ್‍ಮೆಂಟಲಿ ಸೌಂಡ್ ಸ್ಟ್ರಟರ್ಜಿ.
17. ಅಮೃತ್ಮಹಲ್ ತಳಿ ಮತ್ತು ಕಾವಲು ಜೀವೈವಿಧ್ಯತೆ ಅಧ್ಯಯನ ವರದಿ,ಮೈತ್ರಯ-ಪಶ್ಚಿಮ ಘಟ್ಟ ಕಾರ್ಯಪಡೆ, 2011

ದಿನ ಪತ್ರಿಕೆಗಳು 
1. ದ ಹಿಂದು : ಏಪ್ರಿಲ್ 4, ಸೋಮವಾರ, 2011 
2. ಡೆಕ್ಕನ್ ಕ್ರಾನಿಕಲ್: ಸೆಪ್ಟಂಬರ್ 8, 2010

Monday, November 19, 2012

Preserving Grasslands: Meeting of Practitioners and Stakeholders


Karnataka's grasslands and grazing pastures under severe threat
Network formed for conservation and sustainable use of grasslands and grazing pastures


A workshop on ‘Preserving Karnataka’s Grasslands - A Meeting of Stakeholders and Practitioners’ was held in the Livestock Research and Information Centre (Amruthmahal) [LRIC (A)] in Konehalli. The workshop was organized by Maithreya Trust and LRIC(A), Konehalli Tiptur. Karnataka’s natural grasslands and grazing pastures are currently facing several challenges and their very survival is at stake. Such habitats support a variety of wildlife, including the rare Indian Black Buck, and support diverse livelihood options.

Besides, these grasslands offer a distinctive habitat for hardy cow varieties such as the Amruthmahal breed. Deterioration of quality of such habitats due to bad management practices or diversion to other purposes is drastically affecting pasture space and bloodlines of Amruthmahal, a critical feature of the cultural landscape of rural areas. The emphasis of Government policy on promoting exotic breeds is seriously compromising the ability of local communities conserving and sustaining Amruthmahal type of breeds.


Participants in the workshop discussed with serious concern that existing Government policies are diverting such grasslands to a variety of commercial and institutional purposes. For instance, Bidirammanna Gudi Amruthmahal Kaval, spread over 1,500 acres in Tumkur, which is a critical habitat supporting a large black buck population, is sought to be diverted for establishing a Coconut Technology Park. Over 8,500 acres in Kudapura and Dodda Ullaarthi Kaval of Chitradurga district, is being diverted for the setting up a second campus of the Indian Institute of Science, and facilities of Defence Research Development Organisation, Bhabha Atomic Research Center, etc.



In formulating such decisions, neither the Panchayats nor grassland dependent communities such as nomadic shepherds and native cattle keepers are consulted and their consent obtained. Such draconian policies and decisions are a direct and irreversible threat to the sustainability of such natural resource dependent communities, and could well result in the loss of various varieties of local cattle breeds. Needless to state, it may cause the local extinctions of Schedule I species such as the Black Buck and the Dhole (Indian Wild Dogs). Such illegal diversion of commons is forcing communities dependent on such spaces to sell their livestock. Consequently, a cultural tradition honed to perfection over hundreds of years is being lost due to such short-sighted policies.



The lack of a clear policy of the Government in protecting such grasslands is also causing disturbance and annihilation of various rights of local communities. For eg., local deities and cultural practices which are intricately linked to such landscapes are eroded, and even lost. This in turn, incapacitates traditional herders in sustaining their herding practices, which form a critical component of traditional knowledge and wisdom which are protected by the Biological Diversity Act. While their economic conditions worsen, and livelihood rights affected, it also reveals the emptiness in the rhetoric of the Government and International agencies, who proclaim the importance of protecting such habitats and livelihoods that are dependent on them from their pulpits in major meetings such as the recently concluded Convention on Biological Diversity in Hyderabad.



The discussion also focused on the minimal attention being paid by the Government to build governance and management capacities of local communities as endowed in the Forest Right Act, 2006 and the Biological Diversity Act, 2002. Not constituting Forest Rights Committees and Biodiversity Management Committees in the true spirit of the law is seriously compromising fundamental rights of local communities, and what’s worse, resulting in the loss of knowledge of conservation of such habitats. 



The acute focus on only protecting and conserving forests understood in the classical sense as filled with trees, is also resulting in total neglect of grasslands. Often the latter are viewed as “wastelands” and thus making is easy for their diversion to industrial and infrastructure purposes. The workshop also discussed the critical importance of protecting grasslands as watershed and biodiversity havens. In fact, it was emphasized that grasslands must be protected as “Biodiversity Heritage Sites” based on an in situ model of conservation and management involving all communities dependent on them for their livelihoods and survival.



The meeting concluded with a decision to organize a network of shepherd and native cattle keepers, grassland ecologists, biodiversity experts, farmers, policy and law researchers, etc. at the State level and ensure that the conservation and sustainable use of grasslands and grazing pastures as natural habitats must be a priority for the benefit of present and future generations. The network will also identify major grasslands that need to be protected immediately, while focusing on developing laws and policies that will integrate their conservation as a critical component of village development plans and district planning procedures. The emphasis would be to devolve and decentralize the governance of grasslands so that their natural elements are protected, while also accommodating wisely their use for sustenance of various livelihood options.



The workshop involved the participation from across the state. Members of various organizations and institutions viz Karnataka Rajya Raitha Sanga matthu Hasiru Sene, Tumkur & Chikkamagalooru; Akhila Bharath Kisan Sabha, Chitradurga; Janadhani Chikkamagalooru; Environment Support Group, Bengalooru; Alternative Law Forum, Benglooru; Wildlife Awareness Nature Club, Tumku; Mysore Amateur Naturalists, Mysore; Foundation for Ecological Security, Chintamani; Tumkur & Hassana Science Centre; Gubbi Labs, Gubbi; Amruthmahal Kaval Ulisi Horata Samithi Karnataka; Amrithmahal and other native livestock keepers from Gadag, Haveri, Chitradurga and Davangere participated in the meet.



Manohar, Jahnavi, Vinay & Leo



Maithreya Parisara Adhyana Kendra, Tiptur

Ph: 09008729784